Friday, July 8, 2011

ಚುರ್ಮುರಿ -೧೨

೩೮) ತನ್ನನ್ನು ಸಾಕುತ್ತಿರುವನು ಕಟುಕ ಎಂದು ತಿಳಿದ ಕುರಿ, ಅಲ್ಲಿಂದ ಬೇರೆ ಕಡೆಗೆ ಓಡಿಹೋಯಿತು. ಆದರೆ ಪ್ರಪಂಚದಲ್ಲಿರುವವರೆಲ್ಲರೂ ಕಟುಕರು ಎಂದು ತಿಳಿಯುವಷ್ಟರಲ್ಲಿ ಅದು ತನ್ನ ಪ್ರಾಣವನ್ನೇ ಕಳೆದುಕೊಂಡಿತ್ತು.


೩೯) ಅವನು ಮದುವೆಗೆ ಮುಂಚೆ ನವರಂಗ್ ಚಿತ್ರಮಂದಿರದಲ್ಲಿ ೫೦ ರೂ ಕೊಟ್ಟು ಸಿನೆಮಾ ನೋಡುತ್ತಿದ್ದನು, ಮದುವೆಯಾದ ಮೇಲೆ ಮಂತ್ರಿ ಮಾಲ್ನಲ್ಲಿರುವ ಐನಾಕ್ಸನಲ್ಲಿ ೫೦೦ ರೂ ಕೊಟ್ಟು ಸಿನೆಮಾ ನೋಡುತ್ತಿದ್ದಾನೆ.


೪೦) ಅವನು ಕಾರಿನಲ್ಲಿದ್ದರೂ ತಲೆಗೆ ಕ್ಯಾಪ್ ಹಾಕಿಕೊಂಡು ಚಾಲನೆ ಮಾಡುತ್ತಿದ್ದನು.


೪೧) ತನ್ನ ಎದುರಿಗೆ ಎಷ್ಟೋ ಜನ ಭಿಕ್ಷುಕರು (ಕೈ ಇಲ್ಲದಿದ್ದವರು, ಕಾಲು ಇಲ್ಲದಿದ್ದವರು) ಭಿಕ್ಷೆ ಬೇಡಿಕೊಂಡು ಹೋದರೂ ಕಾಸು ಬಿಚ್ಚದಿದ್ದ ಅವನು, ಮಂಗಳಮುಖಿ ಬಂದಾಗ ಕೇಳುವುದಕ್ಕಿಂತ ಮೊದಲೇ ಕಾಸನ್ನು ತೆಗೆದು ಕೊಟ್ಟನು.


೪೨) ಅಲ್ಲೊಂದು ಕನ್ನಡದ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿತ್ತು. ಗುಂಡಿ ತೆಗೆಯುತ್ತಿದ್ದವರು, ಚಪ್ಪರ, ಶಾಮಿಯಾನ ಹಾಕುತ್ತಿದ್ದವರು ತಮಿಳು ತೆಲುಗಿನವರಾಗಿದ್ದರು.

No comments:

Post a Comment