Friday, March 20, 2009

ಒಂದು ದಿನದ ಸಕಲೇಶಪುರ ಟ್ರೆಕ್......

ಸಕಲೇಶಪುರ ಟ್ರೆಕ್ ಹೋಗಬೇಕು ಅಂತ 2 ವಷ‌೯ದಿಂದ ಅಂದುಕೊಂಡಿದ್ದ ನಾವು ಕೊನೆಗೂ 7ರಂದು ಹೋಗುವ ನಿಶ್ಛಯವಾಯಿತು.
ನಾನು,ವೆಂಕ,ಸೌಜ,ಜಯ,ಪಕ್ಯ,ಜುಮ್ಮ,ಮಿತ್ರೇಶ್,ಪಣಿ,ವಿನಯ್,ರಶ್ಮಿ,ಶುಭ,ಶ್ವೇತ ಒಟ್ಟು 12 ಜನ ರಾತ್ರಿ 12ಕ್ಕೆ ಟಿಟಿಯಿಂದ ಬೆಂಗಳೂರನ್ನು ಬಿಟ್ಟೆವು. ವೆಂಕನ ಕಾಲು ಎಳೆಯುವುದರಿಂದ ನಮ್ಮ ಪ್ರಯಾಣ ಶುರುವಾಯಿತು. ವೆಂಕ,ಸೌಜ,ಜಯ,ಪಕ್ಯ,ಚಿಕ್ಕ (ಮೀಟರ್, ಉಲ್ಲ, ಶೆಟ್ಟಿ ಈ ಟ್ರೆಕ್ಗೆ ಬಂದಿರ್ಲಿಲ್ಲ) ಇದ್ರೆ ಯಾರು ಯಾರ ಕಾಲು ಎಳಿತರೋ ದೇವ್ರೆ ಬಲ್ಲ.
ಅಂತು ನಿದ್ರೆ ಇಲ್ಲದೆ ಬೆಳಗ್ಗೆ 5.30ಕ್ಕೆ ದೋಣಿಗಾಲ್ ತಲುಪಿದ್ವಿ, ಕ್ಯಾಬ್ ಡ್ರೈವರ್ಗೆ ಸುಬ್ರಮಣ್ಯ ಸಮೀಪ ಗುಂಡ್ಯಕ್ಕೆ ಹೋಗೋದಕ್ಕೆ ಹೇಳಿ ದೋಣಿಗಾಲ್ ರೈಲ್ವೆ ಸ್ಟೇಶನ್ ತಲುಪಿದ್ವಿ , ಕೆಲವರು ದೇಹಬಾಧೆನ ತೀರಿಸಿಕೊಂಡ್ರು ಇನ್ನು ಕೆಲವರು ಬರ್ದಲೆ ಹಾಗೆ ಉಳಿಸಿಕೊಂಡ್ರು. ದೋಣಿಗಾಲ್ ರೈಲ್ವೆ ಸ್ಟೇಶನ್ನಲ್ಲಿ ಬ್ರಶ್ ಮಾಡಿ, ಮುಖ ತೊಳೆದು ತಂದಿದ್ದ ಕೇಕ್, ಕಾರ ಬನ್ ತಿಂದ್ಕೊಂಡು ಬ್ಯಾಗ್ ಏರಿಸ್ಕೊಂಡು 6 ಗಂಟೆಯಿಂದ ನಮ್ಮ ಟ್ರೆಕ್ ಶುರು ಮಾಡಿದ್ವಿ.ರೈಲ್ವೆ ಟ್ಱಾಕ್ನ್ ಮೇಲೆ ನಮ್ಮ ಪಯಣ ಸೇತುವೆ,ಸುರಂಗಗಳನ್ನು ದಾಟಿ ಸಾಗಿತು. ಸಣ್ಣ ಸೇತುವೆಗಳನ್ನು ದಾಟುವಾಗ ಮೊದ‌ಮೊದಲು ಸ್ವಲ್ಪ ಭಯವಾದರೂ ಈ ತರದ ದಾರಿಗಳು ನಮ್ಮ ಟ್ರೆಕ್ಗಳಲ್ಲಿ (ಇದೇ ಗ್ರೂಪ್, ಇಲ್ಲಿವರೆಗೆ ಏನಿಲ್ಲ ಅಂದ್ರು 10ರಿಂದ 12 ಟ್ರೆಕ್ ಮಾಡಿರಬಹುದು) ಮಾಮೂಲಿ ಆಗಿರೊದ್ರಿಂದ ದಾಟುವುದು ಅಷ್ಟು ಕಷ್ಟ ಆಗಲಿಲ್ಲ, ಅಲ್ಲದೆ ಮುಂದಿನ ಹಾದಿಯಲ್ಲಿ 15ರಿಂದ 20 ಸೇತುವೆ,ಸುರಂಗಗಳನ್ನು ಕ್ರಮಿಸಬೇಕಾಯಿತು, ಹಾಗಾಗಿ ಭಯ ಹೋಗಿ ಇದು ಸಾಮಾನ್ಯದ ಹಾದಿ ಎನ್ನುವ ಸ್ತಿತಿಗೆ ಬಂತು. ಹೊಟ್ಟೆ ಹಸಿದಾಗ ಆಗಾಗ ತಿನ್ನುವುದು, ಅಲ್ಲಲ್ಲಿ ಫೋಟೊ ತೆಗೆಯುತ್ತಾ, ಜಯನ ಫೋಟೊ ಹಾಳು ಮಾಡುತ್ತಾ , ಆಗಾಗ ಯಾರನ್ನಾದ್ರು ಕಾಡಿಸುತ್ತಾ, ಬಕ್ರ ಮಾಡುತ್ತ ನಮ್ಮ ಟ್ರೆಕ್ ಸಾಗ್ತಾ ಇತ್ತು.
ಮಧ್ಯಾಹ್ನ ಆಗ್ತಾ ಆಗ್ತಾ ಹೊಟ್ಟೆ ಹಸಿಯೋಕೆ ಶುರುವಾಯಿತು, ಒಂದು 10 ಕಿ.ಮೀ ನಡೆದಾಗಿತ್ತು, ಮಧ್ಯದಲ್ಲಿ ಒಂದು ಫಾಲ್ಸ್ ಸಿಕ್ತು, ನಾವು ಟ್ರೆಕ್ ಹೋದ ಕಡೆಯೆಲ್ಲಾ ಒಂದು ಫಾಲ್ಸ್ ಸಿಕ್ಕತ್ತೆ, ಅದೇನು ಪುಣ್ಯ ಮಾಡಿದೀವೋ ಗೊತ್ತಿಲ್ಲ , ಅಲ್ಲಿ ಸ್ವಲ್ಪ ನೀರಿನಲ್ಲಿ ಆಟ ಆಡಿ ಆಮೇಲೆ ಊಟ ಮಾಡಿ ಆದ ಮೇಲೆ ಮತ್ತೆ ಟ್ರೆಕ್ ಶುರುವಾಯಿತು, 8 ಕಿ.ಮೀ ನಡೆದ ಮೇಲೆ ಯಡಕಮುರಿ ರೈಲ್ವೆ ಸ್ಟೇಶನ್ ತಲುಪಿದ್ವಿ, ಆಗ ಸಮಯ ಸಂಜೆ 4.30. ಇಲ್ಲಿವರೆಗೆ ಎಲ್ಲಾ ಸರಿಯಾಗೇ ಇತ್ತು, ನಾವು ಅಂದುಕೊಂಡಿದ್ದು ಏನು ಅಂದ್ರೆ ಯಡಕಮುರಿಯಿಂದ ರಸ್ತೆ ಇದೆ ಅಲ್ಲಿಂದ ಗುಂಡ್ಯಕ್ಕೆ ಹೋಗಿ ಟಿಟಿನ ಹಿಡಿಬಹುದು ಅಂತ ತಿಳಿದುಕೊಂಡಿದ್ದೆವು.
ಆದರೆ......................ತಾನೊಂದು ಬಗೆದರೆ ದೈವವೊಂದು ಬಗೆದಂತೆ ಅನ್ನೊ ಹಾಗೆ....
ಇಲ್ಲಿವರೆಗೆ ಆಗಿದ್ದು ಟ್ರೆಕ್ ಆದ್ರೆ ಇನ್ನು ಮುಂದೆ ಆಗಿದ್ದು ಸಾಹಸ....
ಸ‌ರಿ, ಸ್ಟೇಶನ್ ತ‌ಲುಪಾದ‌ ಮೇಲೆ ಸ್ಟೇಶನ್ ಮಾಷ್ಟ್ರ‌ನ‌ ವಿಚಾರಿಸೋದ‌ಕ್ಕೆ ಹೋದ್ವಿ, ಅವ್ನು ಇನ್ನು 13 ಕಿ.ಮೀ ರೈಲ್ವೆ ಟ್ರ್ಯಾಕ್ ಮೇಲೆ ಟ್ರೆಕ್ ಮಾಡ‌ಬೇಕು ಸುಬ್ರಮಣ್ಯ ರೈಲ್ವೆ ಸ್ಟೇಶನ್ ತಲುಪ‌ಲ್ಲಿಕ್ಕೆ ಅಂದ್ರು, ಅಷ್ಟೊತ್ತಿಗೆ ಟಿಟಿ ಸಿಕ್ಕಿದ್ರೆ ಹೋಗಿ ಬಿದ್ಕೊಳ್ಳೊ ಪ‌ರಿಸ್ತಿತಿನ‌ಲ್ಲಿದ್ದ ನಾವು ಆ ವಿಚಾರ‌ ಕೇಳಿ ಸ್ವಲ್ಪ ಹೊತ್ತು ಏನು ಮಾಡ‌ಬೇಕು ಅಂತ‌ ತೋಚ‌ಲಿಲ್ಲ. ಆಮೇಲೆ ಯಾವ‌ದಾದ್ರು ಶಾಟ್೯ ಕ‌ಟ್ ಇದೆಯಾ ಅಂತ‌ ವಿಚಾರಿಸಿದಾಗ‌, ಕಾಡಿನ‌ ದಾರಿಯ‌ಲ್ಲಿ 6 ಕಿ.ಮೀ ಹೋದ್ರೆ ಗುಂಡ್ಯ ಸಿಗ‌ತ್ತೆ ಅಂದ್ರು, ಆದ್ರೆ ಅಲ್ಲಿ ಆನೆ ಮತ್ತೆ ವಿಷಸರ್ಪಗಳು ಇರುತ್ತದೆ ನೋಡ್ಕೊಂದು ಹೋಗಿ ಅಂದ್ರು ಅಲ್ಲದೆ ಒಂದು 4 ಕಿ.ಮೀ. ಆಚೆ ಒಂದು ಸಣ್ಣ ಡ್ಯಾಮ್ ಬರತ್ತೆ, 6 ಘಂಟೆಗೆ ನೀರು ಬಿಡ್ತರೆ ಅಷ್ಟರೊಳಗೆ ನೀವು ಹೋಗಬೇಕು ಅಂದ್ರು. ಆಗ ಸಮಯ 4.45. ಸ‌ರಿ ಅದೇ ದಾರಿನ‌ಲ್ಲೆ ಹೋಗೋಣ‌ ಅಂತ‌ ನಿಧಾ೯ರ ಮಾಡಿ ಕಾಡಿನ‌ ಹಾದಿ ಹಿಡಿದೆವು.
ಅಬ್ಬ!!!!! ಆ ದಾರಿ ನೋಡಿದ್ರೆ ಊರಿನಲ್ಲಿರೋರು ಇರ್ಲಿ ಕಾಡು ಮನುಷ್ಯರು, ಕಾಡು ಪ್ರಾಣಿಗಳು ಹೋಗೋದು ಕಷ್ಟ ಅನ್ನೋ ಸ್ತಿತಿಯಲ್ಲಿತ್ತು. ಪಾಪ ಆ ಹೆಣ್ಣುಮಕ್ಕಳ ಪ‌ರಿಸ್ತಿತಿಯಂತೂ ಹೇಳತೀರದು, 1 ಕಿ.ಮೀ ಕಷ್ಟಪಟ್ಟು ನಡೆದಾದ ಮೇಲೆ ಆ ರಸ್ತೆ ಕಥೆ ನೋಡಿ ಎಲ್ಲರನ್ನು ಒಂದು ಕಡೆ ನಿಲ್ಲಲು ಹೇಳಿ, ನಾನು ಜಯ,ಜುಮ್ಮ ಸ್ವಲ್ಪ ಮುಂದೆ ಹೋದೆವು, ಆಗ ಒಂದು ಸಣ್ಣ ಹೊಳೆ ಸಿಕ್ತು, ಜಯ ಮತ್ತು ಜುಮ್ಮ ಇಬ್ಬರನ್ನು ಒಂದು ಕಡೆ ನಿಲ್ಲಲು ಹೇಳಿ ನಾನು ಆ ಹೊಳೆಯನ್ನು ದಾಟಿ ಮುಂದಿನ ದಾರಿಯನ್ನು ಹುಡುಕಲು ಹೊರಟೆ, ಆ ದಾರಿ ಬಾರಿ ಕಿರಿದಾಗಿತ್ತು ಅಕಸ್ಮಾತ್ ಆನೆ ಬಂದಿದ್ರು ಎಸ್ಕೇಪ್ ಆಗೋ ಚಾನ್ಸೆ ಇರ್ಲಿಲ್ಲ, ಬಂದಿದ್ರು ಬಾರಣ್ಣ ನಿನಗೆ ಕಾಯ್ತಾ ಇದ್ದೆ ಅನ್ನಬಹುದಿತ್ತು ಅಷ್ಟೆ.
ಇನ್ನೇನು, ಆ ದಾರಿನಲ್ಲಿ ಹೋಗೋಕಾಗಲ್ಲ ಅಂತ ಅನ್ನಿಸಿದ ಮೇಲೆ ಜಯ,ಜುಮ್ಮ ಇರೋ ಕಡೆ ಬಂದು ವಾಪಸ್ ಹೋಗೋಣ ಅಂದೆ. ಜೀವ ಅನ್ನೋದಿದ್ರೆ ಇಂತ ಸಾವಿರ ಟ್ರೆಕ್ ಮಾಡಬಹುದು ಅಂದ್ಕೊಂಡು 'ಬಂದ ದಾರಿಗೆ ಸುಂಕ ಇಲ್ಲ' ಅಂದ್ಕೊಂಡು ವಾಪಸ್ ಮತ್ತೆ 1 ಕಿ.ಮೀ ನಡೆದು 'ಹಳೆ ಗಂಡನ ಪಾದವೇ ಗತಿ' ಅಂತ ಯಡಕಮುರಿ ರೈಲ್ವೆ ಸ್ಟೇಶನ್ ಹತ್ತಿರ ಬಂದ್ವಿ. ಅಷ್ಟೊತ್ತಿಗಾಗಲೆ ಎಲ್ಲರೂ ಹಣ್ಣುಗಾಯಿ ನೀರುಗಾಯಿ ಆಗಿದ್ವಿ.
ಸ್ಟೇಶನ್ ಮಾಷ್ಟರ್ (ಬಿಹಾರಿಯವನು) ನ‌ಮ‌ಗೆ ಆ ದಾರಿಯ‌ಲ್ಲಿ ಹೋಗ‌ಬೇಡಿ ಅಂತ‌ ಅಂದಿದ್ದ, ಆದ‌ರೂ ನಾವು ಅವ‌ನ‌ ಮಾತು ಕೇಳ‌ದೆ ಹೋಗಿದ್ದೆವು, ವಾಪ‌ಸ್ ಬ‌ಂದಾಗ‌ ಅವ‌ನು ನ‌ಮ್ಮನ್ನು ನೋಡಿ ಮ‌ನ‌ಸ್ಸಿನ‌ಲ್ಲೆ ಮ‌ಂಡಿಗೆ ತಿಂದಿರ್ತ‌ನೆ, ಸ‌ರಿ ಈಗ‌ ಅವ್ನೆ ನ‌ಮ‌ಗೆ ದೇವ್ರು ಆದ್ರೆ ಆ ದೇವ್ರನ್ನ ನ‌ಮ್ಮ ಕ‌ಡೆ ನೋಡೋ ಹಾಗೆ ಮಾಡೋದ‌ಕ್ಕೆ ಸೌಜ, ಕ‌ನ‌ಕ‌ದಾಸ‌ರು ಶ್ಱೀ ಕ್ರಿಶ್ಹ್ಣನಿಗೆ ಅವನ ಕಡೆ ನೋಡೋದಕ್ಕೆ ಪ್ರಯತ್ನ ಪ‌ಟ್ಟಿದ್ದಕ್ಕಿಂತ‌ಲೂ ಬಾರೀ ಕ‌ಷ್ಟಪ‌ಡ‌ಬೇಕಾಯಿತು, ಯಾಕ‌ಂದ್ರೆ ಗೂಡ್ಸ್ ರೈಲ್ ಆಗ್ಲಿ ಅಥವಾ ಪ್ಯಾಸೆಂಜರ್ ರೈಲ್ ಆಗ್ಲಿ ನಿಲ್ಸೋಕೆ ಆ ದೇವ್ರೆ ಸಿಗ್ನಲ್ ಬ‌ಟ‌ನ್ ಪ್ರೆಸ್ಸ್ ಮಾಡ್ಬೇಕಿತ್ತು ಅಂದ್ರೆ ಆತ‌ನ‌ ಅಪ್ಪಣ್ಣೆ ಬೇಕಾಗಿತ್ತು.
ಆಗ ಸಮಯ 6.15 ಆಗಿತ್ತು. ಸೌಜ ಸ್ಟೇಶನ್ ಮಾಷ್ಟರ್ ಹತ್ತಿರ ಬರೋ ರೈಲ್ ಬಗ್ಗೆ ಹೋಗಿ ವಿಚಾರಿಸಿಕೊಂಡು ಬಂದ, ನಾನು ಹೇಳಿದ್ರೂ ಗೂಡ್ಸ್ ರೈಲ್ ಡ್ರೈವರ್ ಒಪ್ಪಿದ್ರೆ ನಿಲ್ಲಿಸಬಹುದು ಅಂತ ಅವ್ನು ಹೇಳಿದ್ನಂತೆ, ಸರಿ ನಮ್ಮ ಹಣೆಬರಹ ಹೆಂಗಿರತ್ತೊ ಹಾಗೆ ಆಗತ್ತೆ ಅಂತ ಅಲ್ಲೆ ಪ್ಲಾಟ್ಫಾರ್ಮ್ನಲ್ಲಿ ಕೂತ್ಕೊಂಡ್ವಿ.
ಆಗ ವೆಂಕ ನಮ್ಮ ಹಾಗೆ ಟ್ರೆಕ್ ಬಂದವ್ರಲ್ಲಿ ಒಬ್ರನ್ನ ಮಾತಾಡ್ಸ್ತಿದ್ದ, ಅವ್ರು ಹೆಣ್ಣುಮಕ್ಕಳನ್ನ ನೋಡಿ, ಸಾರ್ ಇಲ್ಲಿಂದ 3.5 ಕಿ.ಮೀ ನಡೆದುಕೊಂಡು ಹೋದ್ರೆ ನಮ್ಮ ಪರಿಚಯದವರೊಬ್ರು ಜೀಪ್ನಲ್ಲಿ ಬರ್ತರೆ (ಅವ್ರ್ಯಾರಿಗೋ ಊಟ ಕೊಡೋದಕ್ಕೆ ಬಂದಿದ್ರಂತೆ) ನೀವು ಅಲ್ಲಿಗೆ ಹೋದ್ರೆ ಗುಂಡ್ಯ ತನಕ ಜೀಪ್ನಲ್ಲಿ ಹೋಗಬಹುದು ಅಂದ್ರು, ಆದ್ರೆ ಕಾಡಾನೆಗಳು ರಾತ್ರಿ ಹೊತ್ತು ಬರೋ ಚ್ಯಾನ್ಸ್ ಇರತ್ತೆ ನೋಡ್ಕೊಂಡು ಹೋಗ್ಬೇಕು ಅಂದ್ರು, ಸರಿ ಹಾಗೆ ಮಾಡುವ ಅಂತ ಎಲ್ಲರನ್ನು ಕೇಳಿದ್ರೆ ಹೆಣ್ಣುಮಕ್ಕಳ್ಯಾರು ನಮ್ಮ ಹತ್ತಿರ ಇನ್ನೊಂದು ನಯಾಪೈಸೆಯಷ್ಟು ದೂರನೂ ನಡೆಯೋಕಾಗಲ್ಲ ಅಂದ್ರು.
ಛೆ, ಏನಪ್ಪ ಮಾಡೋದು ಅಂತ ಯೋಚಿಸುತ್ತಿರುವಾಗ...
ನಾನು ಅಲ್ಲಿದ್ದವರಿಗೆ, ನಾನು, ವೆಂಕ ಜೀಪ್ ಇರೋ ಜಾಗಕ್ಕೆ ಹೋಗಿ ಅಲ್ಲಿಂದ‌ ಗುಂಡ್ಯಕ್ಕೆ ಹೋಗಿ ಆಮೇಲೆ ಸುಬ್ರಮಣ್ಯಕ್ಕೆ ಹೋದ್ರೆ ಹೆಂಗೆ ಅಂದೆ. ಅದಕ್ಕೆ ಎಲ್ಲರೂ ಬೇಡ ಅಂದ್ರು, ಸ್ವಲ್ಪ ಹೊತ್ತಾದ ಮೇಲೆ ಸೌಜ, ಸರಿ ಹಾಗೆ ಮಾಡಿ ಅಂದ.
ವೆಂಕ ನಾನು ಹೊರಟ್ವಿ.ಮೊದಲೇ ಸುಸ್ತಾಗಿ ಹೋಗಿದ್ದ ನಾವು ವಿಧಿಯಿಲ್ಲದೆ ನಡೆಯಬೇಕಾಯಿತು. 6.30, ಕತ್ತಲಾಗುತ್ತಾ ಬರುತ್ತಿತ್ತು. ಆನೆ, ಹಾವುಗಳ ಭಯ, ಸರಿ 2 ಕಿ.ಮೀ ಹೋಗಿರಬೇಕು, ಆಗ ಊಟ ತರುತ್ತಿರುವವರು ಸಿಕ್ಕಿದ್ರು, ಅವ್ರನ್ನ ಕೇಳಿದಾಗ, ಸಾರ್ ಅವ್ರು ಬಹುಶಃ ಹೋಗಿರ್ತಾರೆ, ಯಾಕಂದ್ರೆ ಆ ದಾರಿಯಲ್ಲಿ ಆನೆಗಳು ತುಂಬಾ ಇವೆ. ಇಲ್ಲಿವರೆಗೆ ಬಂದಿದ್ದೀರಾ ಅಲ್ಲಿ ತನಕ ಹೋಗಿ ಬನ್ನಿ ಅಂತ ಅಂದ್ರು.
ಈಗ‌ ಇಬ್ಬರಿಗೂ ಮ‌ತ್ತೊಂದು ಸ‌ಮ‌ಸ್ಯೆ ಎದುರಾಯಿತು. ಅಕ‌ಸ್ಮಾತ್ ಜೀಪ್ ಅಲ್ಲಿಲ್ಲ ಅಂದ್ರೆ ಏನು ಮಾಡುವುದು???1. ಗೂಡ್ಸ್ ರೈಲಿಗೆ ಅಡ್ಡ ಹಾಕುವುದು.2. ಇನ್ನೊಂದು ವಾಪ‌ಸ್ ಯ‌ಡ‌ಕ‌ಮುರಿ ರೈಲ್ವೇ ಸ್ಟೇಷನ್ ಹೋಗುವುದು (ಮ‌ತ್ತೆ 3.5 ಕಿ.ಮೀ).
ಜೀಪ್ ಇರೋ ಜಾಗ‌ದ‌ ಹ‌ತ್ತಿರ‌ ಸ‌ಮೀಪಿಸುತ್ತಿರುವಾಗ‌ ನ‌ಮ‌ಗೆ ಅಲ್ಲಿ ಕೆಲ‌ಸ‌ ಮುಗಿಸಿ ಮ‌ನೆಗೆ ಹೋಗುವುದ‌ಕ್ಕೆ ‍ಕಾಯುತ್ತಿದ್ದ ರೈಲ್ವೇ ಕಾರ್ಮಿಕ‌ರು ಸಿಕ್ಕಿದ್ರು, ಮುಂದೆ ರ‌ಸ್ತೆ ಇದೆ ಹೋಗಿ ನೋಡು ಅಂದ್ರು, ಆಗ‌ ಸುಬ್ರಮಣ್ಯಕ್ಕೆ ಬರುವ ಗೂಡ್ಸ್ ರೈಲ್ ಸ‌ದ್ದಾಯಿತು. ನಾವು ಜೀಪ್ ಇದೆಯಾ ಅಂತ‌ ನೋಡ‌ಲು ಒಂದು ಸ‌ಣ್ಣ ಸೇತುವೆ ಮ‌ತ್ತೆ ಸುರ‌ಂಗ‌ವ‌ನ್ನು ದಾಟ‌ಬೇಕಾಗಿತ್ತು, ಇತ್ತ ಕ‌ಡೆ ಗೂಡ್ಸ್ ರೈಲ್ ಅತ್ತ ಕ‌ಡೆ ಜೀಪ್....
ಆಗ ನಾನು, ವೆಂಕ ನೀನು ಇಲ್ಲೇ ಇರು ನಾನು ಆ ಸೇತುವೆ ಮ‌ತ್ತೆ ಸುರಂಗ ದಾಟಿ ಜೀಪ್ ನೋಡ್ಕೊಂಡು ಬೇಗ ಓಡಿ ಬರ್ತೀನಿ ಅಂದೆ, ಸರಿ ಹಾಗೇ ಮಾಡು ಆದ್ರೆ ಎಲ್ಲಾ ಬೇಗ ಆಗ್ಬೇಕು ಅಂದ, ಅಂದ್ರೆ ಆ ಟೈಮಲ್ಲಿ ಸೇತುವೆ ಮ‌ತ್ತೆ ಸುರಂಗ ದಾಟಿ ಜೀಪ್ ನೋಡಿ ಮತ್ತೆ ವಾಪಸ್ ಬಂದು ರೈಲ್ ನಿಂತ್ರೆ ಹತ್ತಬೇಕಾದಂತ ಪರಿಸ್ಥಿತಿ.

ಸರಿ ಓಡಿದೆ, ಹೋಗಿ ನೋಡಿದ್ರೆ ಆಗಿನ್ನೂ ಜೀಪ್ ಹೋದ ಸದ್ದು ಕೇಳಿಸ್ತು. ವಿಧಿಯಿಲ್ಲದೆ ಮತ್ತೆ ವಾಪಸ್ ಆಗ್ಬೇಕು, ಮತ್ತೆ ಓಡಿ ಅಂತೂ ವೆಂಕ ಇರೋ ಜಾಗ ತಲುಪಿದೆ. ಇನ್ನೇನು ಈ ಕಾರ್ಮಿಕರು ರೈಲ್ ನಿಲ್ಲಿಸ್ತಾರೆ ನಮ್ಮನ್ನೂ ಹತ್ತಿಸಿಕೊಂಡು ಹೋಗ್ತಾರೆ ಅಂತ ಸ್ವಲ್ಪ ಧೈರ್ಯ ಬಂತು (ಯಾಕಂದ್ರೆ ವೆಂಕ,ನಾನು ಅವರೊಟ್ಟಿಗೆ ಮಾತಾಡಿ ಚೆನ್ನಾಗಿ ಪರಿಚಯ ಮಾಡಿಕೊಂಡಿದ್ವಿ.

ರೈಲ್ ಬಂತು ಅವ್ರು ಅಡ್ಡ ಹಾಕಿದ್ರು ಆದ್ರೆ ಉಹುಂ ನಿಲ್ಲಿಸ್ಲಿಲ್ಲ....

ನಾನು,ವೆಂಕ ಜೊತೆಗೆ ಆ ಕಾರ್ಮಿಕರು, ಬ್ಯಾಗ್ನಲ್ಲಿ ತಿನ್ನೋದಕ್ಕೆ ಏನೂ ಇಲ್ಲ, ವೆಂಕ ಟ್ರಿಪ್ನಲ್ಲಿ ದುಡ್ಡು ಕೊಟ್ಟು ಪರ್ಸ್ ಖಾಲಿ ಮಾಡ್ಕೊಂಡಿದ್ದ, ನಾನು ಆ ತಿಂಗಳು ಬರ್ಬಾದ್ ಆಗಿಹೋಗಿದ್ದೆ. ಚಿಕ್ಕ ಎಷ್ಟಿದೆಯೋ ದುಡ್ಡು ಅಂದ, ತೆಗೆದು ನೋಡಿದೆ 100 ಇತ್ತು, ತೋರ್ಸಿದೆ.

ರಾತ್ರಿ 7:30, ಜೇಬ‌ಲ್ಲಿ ದುಡ್ಡಿಲ್ಲ, ತಿನ್ನೋದ‌ಕ್ಕೆ ಏನಿಲ್ಲ, ಮೊಬೈಲ್ ಸಿಗ್ನಲ್ ಇಲ್ಲ, ವೆಂಕ‌ನ‌ ಮೊಬೈಲ್ ಚಾರ್ಜಿಲ್ಲದೆ ಬೇಸ‌ತ್ತು ನಿದ್ರೆ ಮಾಡ್ತಿತ್ತು, ನ‌ನ್ನ ಮೊಬೈಲ್ ಎಲ್ಲೋ ಸ್ವಲ್ಪ ಜೀವ‌ ಇಟ್ಕೊಂಡಿತ್ತು, ಅದಕ್ಕೂ ಸುಸ್ತಾಗಿ ಹೋಗಿತ್ತು, 2 ದಿನ‌ ಚಾರ್ಜಿಲ್ಲದೆ.

ಈಗೇನು ಮಾಡ್ಬೇಕು ಅಂತ‌ ಗೊತ್ತಾಗ‌ದೆ ಸ್ವಲ್ಪ ಹೊತ್ತು ಹಾಗೆ ಕೂತ್ಕೊಂಡ್ವಿ, ಅಷ್ಟೊತ್ತಿಗೆ ಸುಬ್ರಮಣ್ಯ . ವೆಂಕ‌, ಮುಂದೆ ಹೋಗಿ ಸಿಗ್ನಲ್ ಸಿಗ‌ತ್ತೇನು ಅಂತ‌ ನೋಡ್ಕೊಂಡು ಬ‌ರ್ತೀನಿ ಇಲ್ಲೇ ಇರು ಅಂದೆ, ಸ‌ರಿ ಅಂದ‌. ತುಂಬಾ ಕ‌ತ್ತಲು, ಕ್ಷಣ ಕ್ಷಣ‌ ಮೊಬೈಲ್ ಚಾರ್ಜ್ ಕ‌ಡಿಮೆಯಾಗ್ತಿತ್ತು

ಇವ್ನಿಗೆ ಗೊತ್ತು ಅಂತ ಖುಷಿಪಡ್ಲೋ ಅಥವಾ ಅವ್ಳಿಗೆ ಗೊತ್ತಿಲ್ಲ ಅಂತ ದುಃಖ‌ಪಡ್ಲೋ....

ಸ್ವಲ್ಪ ದಿನದ ಹಿಂದೆ ನಾನು ಮತ್ತೆ ನನ್ನ ಫ್ರೆಂಡ್ (ಸರಬ್ಜಿತ್ ಸಿಂಗ್ ಅವ್ನ ಹೆಸ್ರು) ಊಟಕ್ಕೆ ಬೈಕ್ನಲ್ಲಿ ಹೋಗ್ತಿದ್ವಿ. ಒಂದು ಸಿಗ್ನಲ್ ಸಿಕ್ತು ಬೈಕ್ ನಿಲ್ಲಿಸಿಕೊಂಡಿದ್ವಿ, ಸ್ವಲ್ಪ ಹೊತ್ತಾದ ಮೇಲೆ ನಾನು ಬಲಕ್ಕೆ ತಿರುಗಿದೆ, ಆಗ ಒಬ್ರು ಆಟೋ ಡ್ರೈವರ್ ನಮ್ಮನ್ನೆ ಪಿಳಿಪಿಳಿ ಅಂತ ನೋಡ್ತಿದ್ರು.
ನಾನು ಏನು ಸಾರ್ ಹಾಗೆ ನೋಡ್ತಿದ್ದೀರಾ ಅಂದೆ...
ಅದಕ್ಕೆ ಅವ್ರು ನ‌ಂಗೆ, ಸಾರ್ ನೀವು ಮೊಬೈಲಿನ‌ಲ್ಲಿ ಮಾತಾಡ್ತಿದ್ದೀರಾ ಅಂತ‌ ಅನ್ದ್ಕೊಂಡೆ ಆದ್ರೆ ಮ‌ತ್ತೆ ಅನುಮಾನ‌ ಬ‌ಂತು ಅಂದು ನನ್ನ ಫ್ರೆಂಡ್ ಕ‌ಡೆ ತಿರುಗಿ, ಏನ್ಸಾರ್ ಇಷ್ಟು ಚೆನ್ನಾಗಿ ಕ‌ನ್ನಡ‌ ಮಾತಾಡ್ತೀರಾ ಅಂತ‌ ಕೇಳಿದ್ರು, ಅದ್ಕೆ ಇವ್ನು ಹೂಂ ಸಾರ್ ಬ‌ರ‌ತ್ತೆ (ತುಂಬಾ ವ‌ರ್ಷ‌ದ‌ ಹಿಂದೆ ಅವ್ರು ಮೈಸೂರಿನ‌ಲ್ಲಿ ವಾಸ‌ವಾಗಿದ್ದಾರೆ) ಅಂತ‌ ಅಂದ‌.
ಲಿಪಿ ಬ‌ರೆಯೋಕೆ ಬ‌ರ‌ತ್ತಾ ಸಾರ್ ಅಂದ್ರು, ಇವ್ನು ಬ‌ರ‌ತ್ತೆ ಅಂದ‌.
ಆಗ‌ ಅವ್ರು, ನ‌ನ್ನ ಮ‌ಗ‌ಳು ಇದ್ದಾಳೆ ಸಾರ್ (ಬಿ.ಎಸ್ಸಿ ಮಾಡ್ತಿದ್ದಾರ‌ಂತೆ) ಆದ್ರೆ ಅವ್ಳಿಗೆ ಲಿಪಿ ಅಷ್ಟು ಚೆನ್ನಾಗಿ ಬ‌ರ‌ಲ್ಲ ಅಂತ‌ ಅಂದ್ರು!!!!
ಇವ್ನು ಬಿಡಿ ಇಲ್ಲಿಗೆ ಬಂದು ಪೂರ್ತಿ ಕ‌ನ್ನಡ‌ದ‌ವ‌ನೆ ಆಗಿದ್ದಾನೆ, ಆದ್ರೆ ಇಲ್ಲೇ ಹುಟ್ಟಿರೋರ‌ ಕ‌ಥೆ ಹೀಗೆ...

ಕರ್ವಾಲೋ ಓದಿದಾಗ....


ತೇಜಸ್ವಿಯವರ ಕರ್ವಾಲೋ ಓದಿದಾಗ ನನಗನಿಸಿದ್ದು...
1) ಚಾರಣ ಮಾಡಿದ ಅನುಭವ.
2) ನನ್ನ ಊರಿನ ಜನಗಳೊಂದಿಗೆ ಮಾತಾಡಿದ ಅನುಭವ.
3) ತೋಟದಲ್ಲಿ ತಿರುಗಾಡಿದ ಅನುಭವ.
4) ಅದರಲ್ಲಿಯ ತೇಜಸ್ವಿ ಪಾತ್ರ ನಮ್ಮಪ್ಪನಿಗೆ ಹೋಲಿಕೆಯಾದ ಅನುಭವ.
ಒಟ್ಟಿನಲ್ಲಿ ಒಂದು ಸರಳವಾದ ಸುಂದರವಾದ ಪುಸ್ತಕ‌

ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ...


ನಮ್ಮ ಆಫೀಸ್ ಎದುರುಗಡೆ ಸ್ಕೂಲಿದೆ, ಅಲ್ಲಿ ಹುಡುಗಿಯರು ಕುಂಟಬಿಲ್ಲೆ ಆಡ್ತಿದ್ರು ಅದನ್ನು ನೋಡಿ ನನ್ನ ಹಳೆಯ ದಿನಗಳು ಜ್ನಾಪಕಕ್ಕೆ ಬಂತು.
ಎಷ್ಟು ಚೆನ್ನಾಗಿತ್ತಲ್ವ ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ, ಮರಕೋತಿಯಾಟ, ಕಳ್ಳ ಪೋಲಿಸ್ ಇನ್ನೂ ಏನೇನೋ....ಆಮೇಲೆ ಯಾವುದೇ ರೀತಿಯ ಚಿಂತೆಗಳಿರಲಿಲ್ಲ.
ಈಗ, ನಾವು ಉಸಿರಾಡ್ತ ಇದೀವಾ ಅಂತ ತಿಳಿದುಕೊಳ್ಳೋದಕ್ಕೂ ಪುರುಸೊತ್ತಿಲ್ಲ

ಕೆಲಸಕ್ಕೆ ಹೋಗುತ್ತಿದ್ಡಾಗ ಓಕಳಿಪುರಂ ಹತ್ತಿರ....

ನಾನು ಬಸ್ಸಿನಲ್ಲಿ ಕಂಪನಿಗೆ ಹೋಗುವಾಗ ಹಾಗೆ ಸುಮ್ಮನೆ ಗೋಡೆಗಳಲ್ಲಿ ಬರೆದಿರುವ ಚಲನಚಿತ್ರಗಳ ಮೇಲೆ ಕಣ್ನು ಹಾಯಿಸುತ್ತಿರುತ್ತೇನೆ....ಹಾಗೆ ಒಂದು ದಿನ ಕೆಳಗಿನ ಚಲನಚಿತ್ರಗಳ ಹೆಸರುಗಳನ್ನು ನೋಡಿ....
1) ಸುನಾಮಿ.2) ಒಂಟಿಮನೆ.3) ನಿನಗಾಗಿ ಕಾದಿರುವೆ.4) ಜೋಶ್.
ಹೀಗೆ ಬರೆಯುವ ಮನಸ್ಸಾಯ್ತು...
ಒಂಟಿಮನೆಯಲ್ಲಿ ನಿನಗಾಗಿ ಕಾದಿರುವ ಸುನಾಮಿ ಎಂಬ ಜೋಶ್....

ನಾಯಿ ಇದೆ ಎಚ್ಚರಿಕೆ.....!!!!

ನಾಯಿಯನ್ನು (ನಾಯಿ ಇದೆ ಎಚ್ಚರಿಕೆ ಅಂತ ಬೋರ್ಡ್ ಹಾಕಿರುವ) ಸಾಕಿರುವ ಬೆಂಗಳೂರಿನ ಬಾಂಧವರೆಲ್ಲರಿಗೂ ನನ್ನ ನಮಸ್ಕಾರಗಳು.
ಏನ್ರಣ್ಣ ಚೆನ್ನಾಗಿದ್ದೀರಾ?.
ನಿಮ್ಮ ನಾಯಿ ಚೆನ್ನಾಗಿದೆಯಾ?.
ನಿಮ್ಮ ನಾಯಿಗೆ ನೀವು ತಿನ್ನೋ ತಿಂಡಿ/ಊಟನೆ ಕೊಡ್ತೀರಲ್ಲ.... ಇಲ್ಲಂದ್ರೆ ಅದಕ್ಕೆ ವಿಶೇಷವಾಗಿರೋ ಸ್ನ್ಯಾಕ್ಸ್ ಕೊಡ್ತೀರಾ...
ನಿಮ್ಮ ಸೋಫಾ ಮೇಲೆ ಮಲಗಿಸಿಕೊಳ್ತೀರಾ...ಇಲ್ಲಂದ್ರೆ ಅದಕ್ಕೆ ಒಂದು ರೂಮ್ ಮಾಡ್ಸಿರ್ತೀರಾ...
ಎಲ್ಲ ಸರಿ...ಆದ್ರೆ....
ಎಲ್ಲ ವ್ಯವ‌ಸ್ತೆ ಮಾಡೋ ನೀವು ಅದ‌ಕ್ಕೆ ಒಂದು ಟಾಯ್ಲೆಟ್ ಮಾಡೋಕಾಗ‌ಲ್ವ?
ಸಾರ್ವ‌ಜ‌ನಿಕ‌ರು ಉಪ‌ಯೋಗಿಸೋ ಜಾಗ‌ನ‌ ಹೊಲ‌ಸು ಮಾಡೋಕೆ ನಿಮ‌ಗೆ ಅನುಮ‌ತಿ ಕೊಟ್ಟೋರು ಯಾರು?
ಅಪ‌ರಿಚಿತ‌ರ‌ನ್ನು ನಿಮ್ಮ ಮ‌ನೆಗೆ ಬಿಡ‌ದ‌ ನಾಯಿಯ‌ನ್ನ ಅಪ‌ರಿಚಿತ‌ ಜಾಗ‌ಕ್ಕೆ ಕ‌ರೆದುಕೊಂಡು ಹೋಗಿ ಯಾಕೆ ಹಾಳು ಮಾಡ್ತೀರಾ?
ಏನಂತೀರಾ??

ಕ‌ಕ್ಕಾಬಿಕ್ಕಿ.....

ಕೆಲಸ ಮುಗಿಸಿಕೊಂಡು ಸುಜಾತ ಟಾಕೀಸ್ ಹತ್ತಿರ ಬಸ್ಸಿನಿಂದ ಇಳಿದು ಅಕ್ಕನ ಮನೆಗೆ ನಡೆದುಕೊಂಡು ಹೋಗ್ತಿದ್ದೆ, ಅಲ್ಲೊಂದು ಬ್ಯಾಂಕ್ ಹತ್ತಿರ ಇದ್ದಕ್ಕಿದ್ದ ಹಾಗೆ ಒಬ್ಬಬಿದ್ದು ಒದ್ದಾಡ್ತ ಇದ್ದ, ಅವನ ಜೊತೆ ಅವನ 3 ಗೆಳೆಯರು ಇದ್ರು, ಸುಮಾರು 25 ವರ್ಷ ವಯಸ್ಸಿನವರಿರಬಹುದು. ಅವನು ಒದ್ದಾಡೋದು ನೋಡಿ ಅವ್ರೆಲ್ಲ ಗಾಬರಿಯಾಗಿ ಅವನನ್ನು ಹಿಡ್ಕೊಂಡು ಏನೋ ತಮಿಳಲ್ಲಿ ಉಡ್ರ ಉಡ್ರ ಮಚ ಅಂತಿದ್ರೆ ವಿನಹ ಏನು ಮಾಡ್ಬೇಕು ಅಂತ ಗೊತ್ತಾಗ್ತಿರ್ಲಿಲ್ಲ. ನಾನು ಫಿಟ್ಸ್ ಏನ್ರಿ ಅಂತ ಅವ್ರನ್ನ ಕೇಳಿದಕ್ಕೆ ಅವ್ರು ಇರ್ಬೇಕು ಸಾರ್ ಅಂದ್ರು, ಸರಿ ನಾನು ನನ್ನ ಬ್ಯಾಗ್ನಲ್ಲಿದ್ದ ಕೀ ಅವನ ಕೈಗೆ ಕೊಟ್ಟೆ.
ಒಂದು ನಿಮಿಷ ಏನು ಬದಲಾವಣೆ ಆಗೋ ಲಕ್ಷಣ‌ ಕಾಣಲಿಲ್ಲ, ಬಾಯಿಗೆ ಕೀ ಇಡ್ರಿ ಅಂದೆ, ಅವ್ನು ಇಟ್ಟ, ಉಹುಂ ಆಗ್ಲೂ ಏನು ಬದಲಾವಣೆ ಇಲ್ಲ. ನಾನು ಏನು ಕಥೆನಪ್ಪ ಇದು ಅಂತ ಯೋಚ್ನೆ ಮಾಡ್ತಿರೋ ಹೊತ್ತಿಗೆ ಅವ್ನ ಇನ್ನೊಬ್ಬ ಗೆಳೆಯ ಬಂದು, ಸಾರ್ ಆ ನನ್ಮಗ ಕುಡ್ಕೊಂಡು ಟೈಟ್ ಆಗವ್ನೆ, ನೀವು ಕೀ ಇಸ್ಕೊಂಡು ಹೋಗಿ ಅಂದ!!!!
ನಾನು ಕ‌ಕ್ಕಾಬಿಕ್ಕಿ.....
ಟ್ರ್ಯಾಜಿಡಿನ‌ಲ್ಲಿ ನ‌ಡಿಬೇಕಾಗಿದ್ದ ಕ‌ಥೆ ಕಾಮಿಡಿ ಟ್ರ್ಯಾಕ್ಗೆ ಬ‌ಂದು ನಿಲ್ತು....

ಒಂದ್ಸಾರಿ ತಿರುಗಿ ನೋಡ್ಬಿಟ್ಟೆ...

ನಮ್ಮ ಅಕ್ಕನ ಮನೆಯಿಂದ ಊಟ ಮಾಡಿ ವಾಪಸ್ ಮನೆಗೆ ಹೋಗ್ತಿದ್ದೆ. ನವರಂಗ್ ಹತ್ತಿರ ಒಂದು ಮನೆ ಹೊರಗಡೆ ಒಂದು ಹುಡುಗಿ ಬಟ್ಟೆ ತೊಳಿತಿದ್ಲು, ಮುಂದುಗಡೆಯಿಂದ ಬಂದ ಒಬ್ಬ ಹುಡುಗ ಅವಳನ್ನ ಹಾಗೆ ತಿರುಗಿ ನೋಡಿಕೊಂಡು ಹೋದ. ಆ ಹುಡುಗಿ ಅವನನ್ನೇನು ನೋಡಲಿಲ್ಲ ಆದರೆ ಆ ಕ್ಷಣಕ್ಕೆ ಸರಿಯಾಗಿ ನೋಡ್ಬಿಟ್ ನೋಡ್ಬಿಟ್ ನೋಡ್ಬಿಟ್ಟೆ ಒಂದ್ಸಾರಿ ತಿರುಗಿ ನೋಡ್ಬಿಟ್ಟೆ ಅಂತ ಹಾಡು ಹೇಳಿದ್ಲು...
ಆ ತರ ಸನ್ನಿವೇಶಕ್ಕೆ ಅವರಿಬ್ಬರು ಸಾಕ್ಷಿಯಾಗಿದ್ರೂ, ಅವರಿಗೆ ಅದರ ಅನುಭವ ಆಗಲಿಲ್ಲ...
ಸುಮ್ನೆ ಹೋಗ್ತಿದ್ದ ನನಗೆ ಆಗಿದ್ದು ಸೋಜಿಗ...

ಕೈ ಇರೋವಾಗ ಬಾಯಿ ಯಾಕಯ್ಯಾ?

ನಾವೆಲ್ಲಾ ಗೆಳೆಯರು ನಮ್ಮ ಒಬ್ಬ ಗೆಳೆಯನ ಮದುವೆಗೆ ಮೊಳಕಾಲ್ಮೂರಿಗ ಹೋಗಿದ್ದೆವು, ಮುಹೂರ್ತ ಆದ ಮೇಲೆ ಎಲ್ಲರೂ ಊಟಕ್ಕೆ ಹೋಗಿ ಕುಳಿತೆವು. ಎಲ್ಲರಿಗೂ ಊಟ ಹಾಕಿಕೊಂಡು ಬರ್ತಿದ್ರು, ಎಲೆ ಮೇಲೆ ಪಲ್ಯ, ಪಾಯಸ ಆಸೀನವಾಗಿದ್ದವು.
ಇದ್ದಕ್ಕಿದ್ದಂತೆ ಮೋಹನ್ (ಮೀಟರ್ ಅಂತ ಅಡ್ಡ ಹೆಸರು) ಸ್ವಲ್ಪ ಎಡವಿದ, ಅವನ ಬಾಯಿ ಎಲೆಯ ಹತ್ತಿರ ಹೋಯ್ತು, ಆಗ ಮೇಘರಾಜ್ (ಕೊಪ್ಪಅಂತ ಅಡ್ಡ ಹೆಸರು)ಮೀಟರಿಗೆ 'ಕೈ ಇರೋವಾಗ ಬಾಯಿ ಯಾಕೆ ಹಾಕ್ತೀಯೋ ಮೀಟರ್' ಅಂತ ಅಂದ. ತಕ್ಷಣ, ಮೀಟರ್

'ಪಾಯಸ ನೋಡಿ ತುಂಬಾ ದಿನ ಆಗಿತ್ತು ಕೊಪ್ಪ, ಹಾಗಾಗಿ ಬಾಯಿ ಅಲ್ಲಿಗೆ ಹೋಯ್ತು' ಅಂತ ಎನ್ನಬೇಕೆ...

(ಅ)ತಿಥಿ

ಒಂದು ದಿನ‌ ನಮ್ಮ ಅಕ್ಕನ ಮನೆಯಿಂದ ಊಟ ಮಾಡಿ ವಾಪಸ್ ಮನೆಗೆ ಹೋಗ್ತಿದ್ದೆ. ರಾಜಾಜಿನಗರ 2ನೇ ಬ್ಲಾಕ್ ಹತ್ತಿರ ಒಂದು ಬಾರ್ ಇತ್ತು, ಅದರ ಹೆಸರು 'ಅತಿಥಿ ಬಾರ್ ಮತ್ತು ರೆಸ್ಟೋರೆಂಟ್', ಅದನ್ನು ನೋಡಿದಾಗ ಅಲ್ಲಿ ಮನಸ್ಸಿಗೆ ಬಂದದ್ದು ಹೀಗೆ....
ಒಳಗೆ ಹೋಗುವಾಗ ಅವನು ಅತಿಥಿ
ಹೊರಗೆ ಬರುವಾಗ ಅವನ ತಿಥಿ

Thursday, March 19, 2009

ಆಗ ಡಿ ಡಿ ಒಂದು ಈಗ ನೂರೊಂದು..

ಆಗೆಲ್ಲ ಮನೆಗಳಲ್ಲಿ ಒಂದು ಟಿ.ವಿ, ಒಂದೇ ಚಾನೆಲ್.
ಅದರಲ್ಲಿ ಬರೋ ಕಾರ್ಯಕ್ರಮಗಳಿಗೆ ಕಾತರದಿಂದ ಕಾಯ್ತಿದ್ವಿ, ಕನ್ನಡ ಬರೋಕಿಂತ ಮೊದ್ಲು...
ರಾಮಾಯಣ, ಮಹಾಭಾರತ, ಚಿತ್ರಹಾರ್, ಮೋಗ್ಲಿ, ತೆಹಕಿಕಾತ್, ಮಾಲ್ಗುಡಿ ಡೇಸ್, ಸ್ಟ್ರೀಟ್ ಹಾಕ್, ರಂಗೋಲಿ.
ಆಮೇಲೆ ಕರ್ನಾಟಕ ಪ್ರಾದೇಶಿಕ ಪ್ರಸಾರ ಬಂದ್ಮೇಲೆ...
ಮಾಯಾಮೃಗ, ಗುಡ್ಡದ ಭೂತ, ಚಿತ್ರಮಂಜರಿ, ಭಾನುವಾರದ ಸಂಜೆಯ ಚಲನಚಿತ್ರ.
ಆದರೆ ಈಗ, ಬೇಡ ಬಿಡಿ

ರೈಲ್ವೆ ಇಲಾಖೆ ಲಾಭದಲ್ಲಿ ಆದರೆ ಅಲ್ಲಿಯ ಕಾರ್ಮಿಕರ ಪಾಡು???


ನೀವೆಲ್ಲ, ಲಾಲೂ ಬ‌ಜೆಟ್ ಟಿ.ವಿ ಯ‌ಲ್ಲಿ, ಪೇಪ‌ರ್ನ‌ಲ್ಲಿ ನೋಡಿರ್ತೀರ‌, ರೈಲ್ವೆ ಇಲಾಖೆ ಬಾರೀ ಲಾಭದಲ್ಲಿ ಇದೆ ಅನ್ನೋದ‌ನ್ನು ಕೇಳಿರ್ತೀರ‌, ಆದ‌ರೆ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಕ‌ತೆ ಕೇಳಿ....

ನಾವು ಹೋದವಾರ ಸಕಲೇಶಪುರ ಟ್ರೆಕ್ ಹೋದಾಗ, ಸಂಜೆ 7 ಘಂಟೆಗೆ ಅನಿವಾರ್ಯವಾಗಿ ಸುಬ್ರಮಣ್ಯಕ್ಕೆ ಗೂಡ್ಸ್ ರೈಲ್ಲನ್ನು ಹತ್ತುವ ಪ್ರಸಂಗ ಬ‌ಂತು (ಆಮೇಲೆ ಹ‌ತ್ತಲಿಲ್ಲ ಅನ್ನುವುದು ಬೇರೆಯ‌ ಮಾತು, ಇದ‌ನ್ನ ನ‌ನ್ನ ಸಕಲೇಶಪುರ ಟ್ರೆಕ್ ಲೇಖ‌ನ‌ದ‌ಲ್ಲಿ ವಿವ‌ರಿಸ್ತಿದೀನಿ), ನಾನು, ವೆಂಕ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಜೊತೆ ಗೂಡ್ಸ್ ರೈಲಿನ‌ಲ್ಲಿ ಹೋಗುವುದೆಂದು ತೀರ್ಮಾನಿಸಿದೆವು, ಸ‌ರಿ ಅವ್ರೆಲ್ಲ ಅವ್ರ ಕೆಲಸ‌ ಮುಗಿಸಿ ಗೂಡ್ಸ್ ರೈಲ್ ಬ‌ರುವ‌ ಹಾದಿಯ‌ನ್ನು ಎದುರು ನೋಡ್ತಿದ್ರು, ಅವ್ರ ಸುಪ‌ರ್ವೈಸ‌ರ್ ಸ‌ಹ‌ ಅಲ್ಲಿದ್ರು. ನಾವು ಆ ಕಾರ್ಮಿಕರ ಜೊತೆ ಮಾತಾಡ್ತ ಇದ್ವಿ, ಗೂಡ್ಸ್ ರೈಲ್ ಬ‌ರುವ‌ ಸೂಚ‌ನೆ ಆ ಸುಪ‌ರ್ವೈಸ‌ರ್ಗೆ ಗೊತ್ತಾಯ್ತು, ಅವ್ನು ಇಂತ ಕಡೆ ನಿಲ್ಸೋಕೆ ಹೇಳಿದ‌ ಅನ್ಸತ್ತೆ, ಹಾಗಾಗಿ ನಾವು ಹ‌ತ್ತಲು ತ‌ಯಾರಾಗುತ್ತಿದ್ದೆವು. ಗೂಡ್ಸ್ ರೈಲ್ ಬಂತು, ಆದ‌ರೆ ಡ್ರೈವ‌ರ್ ಮ‌ಹಾಶ‌ಯ‌ ನಿಲ್ಲಿಸ‌ಲಿಲ್ಲ, ಇನ್ನೊಂದು ಗೂಡ್ಸ್ ರೈಲ್ ಕಾಯುವ‌ ಪ‌ರಿಸ್ತಿತಿ ಬ‌ಂತು. ಅದ್ಯಾವ‌ಗ‌ ಬ‌ರ‌ತ್ತೋ ದೇವ‌ರೇ ಬ‌ಲ್ಲ, ಅವ್ನೂ ನಿಲ್ಲಿಸ‌ದೆ ಇದ್ರೆ ಇವ್ರ‌ ಗ‌ತಿ???

ಹಾಗ‌ಂತ‌ ಅವ್ರನ್ನ ಕೇಳಿದಾಗ‌ ಅವ್ರು, ನಿಲ್ಲಿಸ‌ದೆ ಇದ್ರೆ ದೋಣಿಗಾಲ್ ರೈಲ್ವೆ ಸ್ಟೇಶನ್ ಹತ್ತಿರ ಬ‌ರ‌ಬೇಕು, ಆಮೇಲೆ ಅಲ್ಲೆ ಉಳಿದುಕೊಳ್ಳಬೇಕು ಅಂತ ಅಂದ್ರು, ಅದು ಅಲ್ಲಿಂದ‌ 3.5 ಕಿ.ಮೀ., ಯೋಚ‌ನೆ ಮಾಡಿ ರಾತ್ರಿ ಇನ್ನೊಂದು ಗೂಡ್ಸ್ ರೈಲ್ ಕಾದು ಮ‌ತ್ತೆ ವಾಪಸ್ ಬ‌ರ‌ಬೇಕು ಅಂದ್ರೆ....

ಎಂತಾ ವ್ಯವ‌ಸ್ತೆ, ರೈಲ್ವೆ ಇಲಾಖೆ ಕೋಟಿ ಕೋಟಿ ಲಾಭದಲ್ಲಿ...ಆದರೆ ಅಲ್ಲಿಯ ಕಾರ್ಮಿಕರು ತ‌ಮ್ಮ ದೈನ‌ಂದಿನ‌ ಕೆಲ‌ಸ‌ ಮುಗಿಸಿ ಮ‌ನೆಗೆ ಹೋಗುವುದಕ್ಕೆ ಯಾವುದೇ ವ್ಯವ‌ಸ್ತೆ ಇಲ್ಲ.

3 ಟೈಯರ್, ಏ.ಸಿ, ಫಸ್ಟ್ ಕ್ಲಾಸ್, ಸೆಕಂಡ್ ಕ್ಲಾಸ್ ಇರೋದು ಒಂದು ಕ‌ಡೆ ಆದ್ರೆ ಗೂಡ್ಸ್ ರೈಲ್ನಲ್ಲಿ ಮ‌ನೆಗೆ ಹೋಗಿ ತನ್ನ ಕುಟುಂಬ ನೋಡೂದಕ್ಕೆ ಹೆಣ‌ಗಾಡೋ ಕಾರ್ಮಿಕ‌ ಇನ್ನೊಂದು ಕ‌ಡೆ!!!!!

ಬೆತ್ತಲೆ ಜಗತ್ತಿನ ಲೇಖಕರಿಗೆ....

ಪ್ರತಾಪ್ ಸಿಂಹರವರೆ ನಮಸ್ಕಾರ,
ಚೆನ್ನಾಗಿದ್ದೀರಾ. ಫೆಬ್ರವರಿ 21ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ‌ ನಿಮ್ಮ ಕುರುಡು ಕಾಂಚಾಣ ಲೇಖನ ಓದಿದೆ, ಚೆನ್ನಾಗಿ ಬರೆದಿದ್ದೀರಿ ಆದರೆ ಜನರಲೈಸಾಗಿ ಬರೆದಿದ್ದೀರಾ, ಬಾರೀ ಬೇಜಾರಾಯ್ತು. ನಿಮ್ಮ ಲೇಖನದಲ್ಲಿ ಬರೋ ವಿಚಾರಗಳನ್ನೆ ತೆಗೆದುಕೊಂಡು ಮಾತಾಡುವ...
1) ಅಪ್ಪ ನಿವ್ಱ್ಱತ್ತಿಯಾಗುವಾಗ ಪಡೆಯುತ್ತಿದ್ದ ಸಂಬಳವನ್ನ ಮಗ ಕೆಲಸಕ್ಕೆ ಸೇರಿದ ಮೊದಲ ತಿಂಗಳೇ ಪಡೆದುಕೊಳ್ಳಲಾರಂಭಿಸಿದ. ‍‍ಸತ್ಯ, ಅಪ್ಪ (ಕೆಲವು ಅಪ್ಪಂದ್ರು ಎಲ್ಲರೂ ಅಲ್ಲ...) ಬಿ.ಎ, ಬಿ.ಕಾಂ, ಬಿ.ಎಸ್ಸಿ ಓದಿದ ಸರ್ಕಾರಿ ಕೆಲಸಕ್ಕೆ ಸೇರಿದ, 10ಕ್ಕೆ ಮನೆ ಬಿಟ್ಟು ಆಫೀಸಿಗೆ ಹೋಗ್ತನೆ 5 ಗಂಟೆಗೆ ವಾಪಸ್ ಮನೆಗೆ ಹೊರಡ್ತನೆ, ಮಧ್ಯದಲ್ಲಿ ಕಾಫಿ, ಟೀ, ಊಟಕ್ಕೆ 2 ಗಂಟೆ ಗುಳುಂ ಮಾಡಿರ್ತಾನೆ, ಅಂದ್ರೆ ಒಟ್ಟು 5 ಗಂಟೆ ಕೆಲಸ ಮಾಡ್ತನೆ,
ಅದೇ ನೀವು ಹೇಳಿದ ಸಾಫ್ಟ್ವೇರ್ ಇಂಜಿನಿಯರ್, ಬೆಳಗ್ಗೆ 8ಕ್ಕೆ ಮನೆ ಬಿಡ್ತಾನೆ (ಇನ್ನು ಕೆಲವರು ಅದಕ್ಕಿಂತ ಬೇಗ) ರಾತ್ರಿ ಎಷ್ಟೊತ್ತಿಗೆ ವಾಪಸ್ ಬರ್ತನೆ ಗೊತ್ತಿರಲ್ಲ, ಏನಿಲ್ಲ ಅಂದ್ರು 9 ಅಥವಾ 10ಕ್ಕೆ ಮನೆಗೆ ಬರ್ತನೆ , ಅಂದ್ರೆ 11ರಿಂದ 12 ಗಂಟೆ ಆಫೀಸಿನಲ್ಲೇ ಇರ್ತಾನೆ, ಊಟಕ್ಕೆ 30 ನಿಮಿಷ, ಕಾಫಿ, ಟೀ ಅವನ ಡೆಸ್ಕ್ಗೆ ತಂದಿಟ್ಕೊಂಡು ಕುಡೀತಾ ಕೆಲಸ ಮಾಡ್ತಾನೆ, ಹಾಗಾಗಿ ಏನಿಲ್ಲ ಅಂದ್ರು 10ರಿಂದ 11 ಗಂಟೆಗಳ ಕಾಲ ಕೆಲಸ ಮಾಡ್ತನೆ.
ಹಾಗಾಗಿ ಅಪ್ಪಂಗೆ 100ರೂ ಬಂದು ಮಗನಿಗೆ 200ರಿಂದ 250ರೂ ಬರೋದ್ರಲ್ಲಿ ಯಾವ ಅತಿಶಯೋಕ್ತಿಯಿಲ್ಲ.
2) ಇಪ್ಪತ್ತ್ಮೂರು ವರ್ಷಕ್ಕೆ ಕೈ ತುಂಬಾ ದುಡ್ಡೇನೋ ಬಂತು, ದುಡ್ಡಿನ‌ ಬೆಲೆ ಅರ್ಥ‌ ಮಾಡಿಕೊಳ್ಳುವ‌ ವ‌ಯ‌ಸ್ಸು ಅದಾಗಿರ‌ಲಿಲ್ಲ.
ನಮಗೆ 5 ಪೈಸೆಗೆ ಎಷ್ಟು ಗೋಲಿ ಬರ್ತಿತ್ತು ಅಂತನೂ ಗೊತ್ತು, ಈಗ 5 ಪೈಸೆ ಬೆಲೆ ಏನು ಅಂತನೂ ಗೊತ್ತು. ನಮ್ಮಪ್ಪ ಅಮ್ಮ ಪ್ರತಿ ಸೆಮೆಸ್ಟರ್ನಲ್ಲಿ ಫ್ರೀ/ಪೇಮೆಂಟ್ ಸೀಟ್ ದುಡ್ಡು ಕಟ್ಟೋವಾಗ ನಮಗೆ ಅನ್ನಿಸ್ತಾ ಇದ್ದದ್ದು ಏನು ಗೊತ್ತ, ಇಷ್ಟು ಖರ್ಚು ಮಾಡ್ತಾ ಇದ್ದಾರಲ್ಲ ನಾನು ಅವರು ಖರ್ಚು ಮಾಡಿರೋ ಅಷ್ಟು ದುಡ್ಡನ್ನ ಹೇಗಪ್ಪ ದುಡಿಯೋದು ಪ್ರತಿಯೊಬ್ಬ ಇಂಜಿನಿಯರ್ ಸಹ ಯೋಚಿಸಿರ್ತಾನೆ, ಊರಿಗ ಹೋದ್ರೆ ಪ್ರಯಾಣಕ್ಕೆ ದುಡ್ಡು ಖರ್ಚು ಮಾಡ್ಬೇಕಲ್ಲ ಅಂತ ಎಷ್ಟೋ ಹುಡುಗ್ರು ಹಾಸ್ಟೆಲ್ನಲ್ಲೇ ಇದ್ದು ಓದ್ತಿದ್ರು. ಪುಸ್ತಕಗಳ ಬೆಲೆ ಜಾಸ್ತಿ ಅಂತ ಬಹಳ ಜನ ಜೆರಾಕ್ಸ್ ಮಾಡಿಸ್ತಿದ್ರು.
ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಕೆಲಸ ಹುಡುಕಲು ಬಂದಾಗ, ಬಿ.ಎಂ.ಟಿ.ಸಿ ಬಸ್ ಪಾಸ್ ತೆಗೆದುಕೊಂಡು ಎಲ್ಲೆಲ್ಲಿ ಕಂಪನಿಗಳಿದ್ವು ಅಲ್ಲೆಲ್ಲಾ ರೆಸ್ಯೂಮ್ ಕೊಟ್ಟು ಬರ್ತಿದ್ವಿ, ಈಗ್ಲೂ ಸಹ ತುಂಬಾ ಜನ ಸಾಫ್ಟ್ವೇರ್ ಇಂಜಿನಿಯರ್ಸ್ ಬಿ.ಎಂ.ಟಿ.ಸಿ ಬಸ್ನಲ್ಲೇ ಓಡಾಡ್ತಿರ್ತಾರೆ (ಅದ್ರಲ್ಲಿ ನಾನೂ ಸಹ ಒಬ್ಬ).
ಸ‌ಂಬಳ ಬಂದ್ರೆ ನಮ್ಮ ಜೀವನಕ್ಕೆ ಸಾಕಾಗುವಷ್ಟು ಇಟ್ಕೊಂಡು ಮಿಕ್ಕಿದ್ದು ಅಪ್ಪಂಗೋ ಇಲ್ಲ ಉಳಿತಾಯ ಖಾತೆನಲ್ಲಿ ಹಾಕ್ತೀವಿ.
ನಮಗೆ ದುಡ್ಡಿನ ಬೆಲೆ ಗೊತ್ತಿಲ್ಲ ಅಂತೀರಲ್ಲ ನೀವು.
3) ಐ.ಟಿಯ‌ವ‌ರು ಏನು ಮಾಡ್ತಾ ಇದ್ದಾರೆ ಅಂತ‌ ಸಾಮಾನ್ಯ ವ್ಯಕ್ತಿಗೆ ಇನ್ನೂ ಅರ್ಥ‌ ಆಗಿಲ್ಲ.
ನಾನು ಸಾಫ್ಟ್ವೇರ್ ಇಂಜಿನಿಯರ್, ನಾನು ಇದ‌ನ್ನ ಮಾಡ್ತಿದ್ದೀನಿ ಅಂತ‌ ಯಾರಿಗಾದ್ರು ಹೇಳಿದ್ರೆ ಇವ‌ನ್ಯಾರೋ ತ‌ಲೆಹಿಡುಕ‌ ಅಂತಾರೆ.ಹಾಗಾಗಿ ತಿಳಿದುಕೊಳ್ಳೋ ಪ್ರಯ‌ತ್ನ ಮಾಡ್ಕೋಬೇಕು ಸಾರ್, ನ‌ಮ್ಮ ಮಾವ‌ 60 ವ‌ರ್ಷ‌ದ‌ವ‌ರು ಅವ್ರು, ನೀವೇನು ಮಾಡ್ತೀರಾ ಅಂತ‌ ಕೇಳಿ ತಿಳಿದುಕೊಂಡ್ರು. ಗುರು, ಸಿಪಾಯಿ ಬ‌ಗ್ಗೆ ಹೇಗೆ ಗೊತ್ತಾಯ್ತು ಹೇಳಿ, ಹೀಗೆ ಒಬ್ಬರಿಗೊಬ್ಬರು ಮಾತಾಡೋದ್ರಿಂದ‌ ಅಥ‌ವ‌ ಅನುಭ‌ವ‌ದಿಂದ‌. ಐ.ಟಿ ಅಂದ್ರೆ ದುಡ್ಡು ಅನ್ನೋದು ನಿಮ‌ಗೆ ಯಾರೋ ಹೇಳಿರ್ತಾನೆ ನೀವು ಇನ್ನ್ಯಾರಿಗೋ ಹೇಳ್ತೀರಾ.
ಇನ್ನೊಂದು ವಿಷ‌ಯ‌ ಏನು ಗೊತ್ತಾ, ದುಡ್ಡಿನ‌ ವಿಷ‌ಯ‌ ಬ‌ಂದಾಗ‌ ತುಂಬಾ ಜ‌ನ‌ರ‌ ಕಿವಿ ನೆಟ್ಟಗಾಗೋದು ಸ‌ಹ‌ಜ‌. ಯಾವುದೇ ವ್ಯವ‌ಹಾರ‌ ತೆಗೆದುಕೊಳ್ಳಿ, ಭ‌ತ್ತ, ರಾಗಿ, ಅಡ‌ಕೆ, ಕಾಫಿ. ತುಂಬಾ ಜ‌ನ‌ ಕ‌ಡಿಮೆ ದುಡ್ಡಿಗೆ ಮಾರಿ ಇನ್ನು ಕೆಲ‌ವ‌ರು ಜಾಸ್ತಿ ದುಡ್ಡಿಗೆ ಮಾರಿದ್ರೆ ಎಲ್ಲರೂ ಕೇಳೋದೇನ‌ಂದ್ರೆ ಅವ್ನಿಗೆ ಎಷ್ಟು ದುಡ್ಡು ಬ‌ಂತ್ರೀ ಅಂತ‌.
4) ಅವ‌ರ‌ ನಿಷ್ಟೆ ಏನಿದ್ದರೂ ದುಡ್ಡಿಗೆ.
ಯಾರು ಹೇಳಿದ್ದು ಹಾಗ‌ಂತ‌, ತುಂಬಾ ಜ‌ನ‌ ಕೆಲ‌ಸ‌ ಬಿಟ್ಟು ಬೇರೆ ಕ‌ಂಪ‌ನಿಗ‌ಳಿಗೆ ಯಾಕೆ ಹೋಗ್ತಾರೆ ಅಂದ್ರೆ, ಅವ‌ರಿಗೆ ತ‌ಕ್ಕನಾದ‌ ಕೆಲ‌ಸ‌ಕ್ಕೆ ಹಾಕಿರೋದಿಲ್ಲ ಇಲ್ಲಂದ್ರೆ ಅವ‌ರ‌ ಮ್ಯಾನೇಜ‌ರ್ ಸ‌ರಿ ಇರ‌ಲ್ಲ, ಬಾರೀ ಕ‌ಡಿಮೆ ಜ‌ನ‌ ದುಡ್ಡು ಅಂತ‌ ಹೋಗೋದು, ನ‌ಮ್ಮ ಗೆಳೆಯ‌ರ‌ಲ್ಲೇ ಎಷ್ಟೋ ಜ‌ನ‌ ಇವ‌ತ್ತಿಗೂ ಒಂದೇ ಕ‌ಂಪ‌ನೆಯ‌ಲ್ಲೇ ತುಂಬಾ ವರ್ಷದಿಂದ‌ ಕೆಲ‌ಸ‌ ಮಾಡ್ತಿದ್ದಾರೆ.
5) ಸೆಲ್ ಫೋನ್ ಸ‌ಂಖ್ಯೆ ಹೆಚ್ಚಳ‌ ಪ್ರಗ‌ತಿಯ‌ ಸ‌ಂಕೇತ‌ವೇ?
ಐ.ಟಿಯ‌ವ‌ರ‌ ಕೈಲಿ ದುಡ್ಡಿದೆ ಕಾರ್ಮಿಕ‌ರ‌ ಕೈಲಿಲ್ಲ, ಆದ್ರೂ ಯಾಕ್ರೀ ಸೆಲ್ ಫೋನ್ ತ‌ಗೋಳ್ತಾರೆ ಅವ್ರು, ನೀವು ಹೇಳೋದು ಐ.ಟಿಯ‌ವ‌ರಿಗೆ ದುಡ್ಡಿನ‌ ಬೆಲೆ ಗೊತ್ತಿಲ್ಲ, ಕಾರ್ಮಿಕ‌ರು????. ಅವ್ರಿಗೆ ದುಡ್ಡಿನ‌ ಬೆಲೆ ಗೊತ್ತು ಆದ್ರೂ ಸೆಲ್ ಫೋನ್ ತ‌ಗೋಳ್ತಾರೆ, 120ರೂ ಕೂಲಿಯ‌ಲ್ಲಿ 50ರೂ ಸೆಲ್ ಫೋನಿಗೆ ಖ‌ರ್ಚು ಮಾಡ್ತಾರೆ, ಛೆ, ದುಡ್ಡಿನ‌ ಬೆಲೆ ಗೊತ್ತಿರೋರು ಹೀಗೆಲ್ಲ ಮಾಡ‌ಬಾರ‌ದು, ನೀವಾದ್ರೂ ಅವ್ರಿಗೆ ಹೇಳ‌ಬಾರ‌ದ‌??
6) ಇವ‌ತ್ತು ಒಬ್ಬ ಐ.ಟಿಯ‌ವ‌ನು ಕೆಲ‌ಸ‌ ಕ‌ಳೆದುಕೊಂಡ‌ರೆ ಪ್ಯಾನಿಕ್ ಆಗುತ್ತಾನೆ, ಅವ‌ನಿಗೆ ಬೇರೆ ಕೆಲ‌ಸ‌ವೂ ಗೊತ್ತಿಲ್ಲ
ಬೇರೆ ಕ‌ಡೆ ಏನು ಆಗೇ ಇಲ್ವೇನ್ರಿ? ಆರ್ಥಿಕ ಹಿಂಜರಿತದಿಂದ ಗಾರ್ಮೆಂಟ್ಗಳ‌ಲ್ಲಿ ಕೆಲ‌ಸ‌ ಮಾಡೋರು ಆತ್ಮಹ‌ತ್ಯೆ ಮಾಡಿಕೊಂಡಿದ್ದಾರೆ, ಐ.ಟಿಯ‌ಲ್ಲಿ ಹಾಗೆ ಮಾಡಿಕೊಂಡಿರೋದ‌ನ್ನ ಇಲ್ಲಿವ‌ರೆಗೆ ಕೇಳಿಲ್ಲ. ಯಾಕ‌ಂದ್ರೆ ಮುಂದೆ ಸಿಕ್ಕತ್ತೆ ಅನ್ನೋ ಭ‌ರ‌ವ‌ಸೆ ಅವ್ನಿಗೆ ಇರ‌ತ್ತೆ, ಅದೂ ಅಲ್ದಲೆ ಅವ್ನು ಅಷ್ಟು ಸುಲ‌ಭ‌ವಾಗಿ ಇಂಜಿನಿಯ‌ರಿಂಗ್ ಪಾಸಾಗಿ ಬ‌ಂದಿರೊಲ್ಲ, ಅಲ್ಲಿವ‌ರೆಗೆ ಅವ‌ನು ಎಷ್ಟು ಕ‌ಷ್ಟಪ‌ಟ್ಟಿರ್ತಾನೆ ಅಂದ್ರೆ ಏನೇ ಕ‌ಷ್ಟ ಬ‌ಂದ್ರೂ ಎದುರಿಸೋದ‌ಕ್ಕೆ ಸೈ ಅನ್ನೋ ಮ‌ನೋಭಾವ‌ ಬ‌ಂದಿರ‌ತ್ತೆ, ಅಷ್ಟೊಂದು ಸುಲ‌ಭ‌ವಾಗಿ ಸೋಲೊಲ್ಲ.
ಸ್ವಲ್ಪ ಕಾಯೋಣ‌ ನ‌ಮ್ಮ ಫ್ಹೀಲ್ಡ್ನಲ್ಲೇ ಸಿಗ‌ಬ‌ಹುದು ಅನ್ನೋ ಭ‌ರ‌ವ‌ಸೆ ಇಟ್ಕೊಂಡಿರ್ತಾನೆ ಹೊರತು ಬೇರೆ ಕೆಲ‌ಸ‌ದ‌ ಬ‌ಗ್ಗೆ ಅಷ್ಟಾಗಿ ಯೋಚ‌ನೆ ಮಾಡಿರುವುದಿಲ್ಲ. ಅನ್ನ ಬೇಕು ಅಂದ್ರೆ ಹೆಂಗೋ ಜೀವ‌ನ‌ ಮಾಡ್ತಾರೆ, ಅದ‌ಕ್ಕೆ ಬೇರೆಯ‌ವ‌ರು ವ್ಯಂಗ್ಯವಾಗಿ ಮ‌ರುಕ‌ಪ‌ಡೋ ಅವ‌ಶ್ಯಕ‌ತೆಯಿಲ್ಲ.
7) ಐ.ಟಿಯಿಂದಾಗಿ ಸಾವಿರಾರು ಕುಟುಂಬ‌ಗ‌ಳು ಉದ್ಧಾರ‌ವಾದ‌ವು ಎನ್ನುವುದು ಎಷ್ಟು ಸ‌ತ್ಯವೋ ಐ.ಟಿಯ‌ವ‌ರ‌ ಹ‌ಣ‌ದ‌ ಮ‌ದ‌ದಿಂದಾಗಿ ಹ‌ತ್ತು ಪ‌ಟ್ಟು ಹೆಚ್ಚು ಕುಟುಂಬ‌ಗ‌ಳು ಸ‌ಂಕ‌ಷ್ಟಕ್ಕೂ ಸಿಲುಕಿದ‌ವು.
ಸಾಫ್ಟ್ವೇರ್ ಇಂಜಿನಿಯರ್ ಕುಟುಂಬ‌ ಉದ್ಧಾರ‌, ರಿಯ‌ಲ್ ಎಸ್ಟೇಟ್ ಉದ್ಧಾರ‌, ಗಾರ್ಮೆಂಟ್ಸ್ ಉದ್ಧಾರ‌, ಪ್ರವಾಸೋದ್ಯಮ‌ ಉದ್ಧಾರ‌, ಹಾಂ, ನಿಮ್ಮ ಪ‌ತ್ರಿಕೆಗ‌ಳ‌ ಸಂಖ್ಯೆಯ‌ಲ್ಲಿ ಉದ್ಧಾರ‌!!!!!
ಯಾರೋ ಸ್ವಲ್ಪ ಜ‌ನ‌ ಮಾಡೋದ‌ಕ್ಕೆ ಎಲ್ಲರ‌ನ್ನೂ ದೂಷಿಸ‌ಬೇಡಿ, ಅಪ್ಪನ‌ ಹ‌ತ್ರ ದುಡ್ಡು ಇರ‌ತ್ತೆ, ಮ‌ಗನೂ/ಮಗಳೂ ದುಡೀತಿರ್ತಾನೆ/ಳೆ, ಅಪ್ಪ ಮ‌ಗನ‌ನ್ನ/ಮಗಳನ್ನ ದುಡ್ಡು ಏನು ಮಾಡಿದೆ ಅಂತ‌ ಕೇಳೊಲ್ಲ, ಸ‌ಹ‌ಜ‌ವಾಗಿ ಅವ್ರು ಯಾರ ಅಂಕೆಯಿಲ್ಲದೆ ಖ‌ರ್ಚು ಮಾಡ್ತರೆ.
ಕೊನೆಯದಾಗಿ ,ನೀವು ನೋಡೋವಾಗ‌ ಕೆರೆಯ‌ಲ್ಲಿರೋ ತಾವ‌ರೆ ಹೂಗ‌ಳ‌ಲ್ಲಿ ಕೆಲ‌ವೊಂದು ಕ‌ರ‌ಗಿ ಹೋಗಿರ್ತ‌ವೆ ಕೆಲ‌ವು ಚೆನ್ನಾಗಿರ್ತ‌ವೆ,ಕ‌ರ‌ಗಿ ಹೋಗಿರೋ ತಾವ‌ರೆ ಹೂಗ‌ಳ‌ನ್ನು ಮಾತ್ರ ನೋಡಿ ಎಲ್ಲಾ ತಾವ‌ರೆ ಹೂಗ‌ಳು ಹಾಗೆ ಆಗಿವೆ ಅಂತ‌ ತಿಳಿದುಕೊಳ್ಳುವುದು ಅಥ‌ವಾ ಯಾರೋ ಹಾಗೆ ಹೇಳಿದ್ರು ಅಂತ‌ ಇನ್ನೊಬ್ಬರಿಗೆ ಹೇಳುವುದು ಬುದ್ಧಿವ‌ಂತ‌ರ‌ ಲ‌ಕ್ಷಣ‌ವ‌ಲ್ಲ.

ಕಾಫೀ....



ಕಾಫಿ, ಹೆಸರು ಕೇಳಿದ್ರೆ ಸಾಕು ಮೈಯೆಲ್ಲ ರೋಮಾಂಚನ ಆಗತ್ತೆ, ಇನ್ನೇನಾದ್ರು ಕೈಗೆ ಸಿಕ್ಕಿಬಿಟ್ರೆ....
ಚಿಕ್ಕಮಗಳೂರು, ಕಾಫಿಯ ಕಣಿವೆ, ಆ ಕಣಿವೆಯಲ್ಲಿ ನಮ್ಮದೊಂದು ಪುಟ್ಟ ಹಳ್ಳಿ.
ಪೇಟೆಯ ಜಂಜಡಗಳಿಂದ ತುಂಬಾ ದೂರದಲ್ಲಿರುವ ಹಳ್ಳಿ, 60 ಮನೆಗಳು, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಕರು (ಅಣ್ಣ, ತಮ್ಮ, ದೊಡ್ಡಪ್ಪ, ದೊಡ್ಡಮ್ಮ,ಚಿಕ್ಕಪ್ಪ, ಚಿಕ್ಕಮ್ಮ....).
ಎಲ್ಲೆಲ್ಲಿ ನೋಡಿದರೂ ಹಸಿರು ಹಸಿರು ಹಸಿರು....ಕಾಫಿ ತೋಟ, ಭತ್ತದ ಗದ್ದೆ, ಹಳ್ಳದ ಸಾಲು...ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆನ್ನುವ ಬಯಕೆ.
ಬೆಳಗ್ಗೆ 7 ಗಂಟೆಯಾದರೂ ಸೂರ್ಯನ ಕಿರಣಗಳು ಗಿಡ ಮರಗಳ ಸಾಲಿನಿಂದ ಬಂದು ಭೂಮಿಯನ್ನು ತಲುಪಲು ಹರಸಾಹಸ ಮಾಡುತ್ತಿರುತ್ತವೆ, ಚಳಿ ಅನ್ನೋದು ಕುಣಿದಾಡುತ್ತಿರುತ್ತದೆ. ಆಗ ಎದ್ದು ಹಲ್ಲುಜ್ಜಿ ಮುಖ ತೊಳೆದು ಮನೆ ಎದುರುಗಡೆ ಬಂದು ಮುಳ್ಳಯ್ಯನಗಿರಿ, ರಂಗನಬೆಟ್ಟ ನೋಡಿದ್ರೆ ಆಗೋ ಉಲ್ಲಾಸ ವರ್ಣನಾತೀತ, ಆ ಹಕ್ಕಿಗಳ ಕಲರವ, ಎಲೆಗಳ ಮೇಲಿರುವ ಹನಿಗಳು, ಅದರ ಮೇಲೆ ಸೂರ್ಯನ ಕಿರಣಗಳ ಚಿತ್ತಾರ....
ಅದೇ ಸಮಯಕ್ಕೆ ನಾನು ಎದ್ದು ಬಂದದ್ದನ್ನು ನೋಡಿ ನಮ್ಮಮ್ಮ, ಮಗಾ ಕಾಫಿ ಕೊಡ್ಲಾ ಅಂತ ಕೇಳಿದ್ರೆ ಯಾರು ಬೇಡ ಅಂತ ಹೇಳ್ತಾರೆ.
ಅಡಿಗೆ ಮ‌ನೆಗೆ ಹೋಗಿ ಅಮ್ಮ ಕಾಫಿ ಮಾಡ್ತಿದ್ರೆ ಆ ಸುವಾಸ‌ನೆಯೇ ಸಾಕು ಅರ್ಧ‌ ಚ‌ಳಿ ಹೋಗಿಸ‌ಲಿಕ್ಕೆ.
ಇನ್ನು ಅಮ್ಮ ಬಂದು ಆ ಕಾಫಿ ಕೈಗಿಟ್ರೆ ಪೂರ್ತಿ ಚ‌ಳಿ ಮೈ ಬಿಟ್ಟು ಹೋಗ‌ತ್ತೆ.
ಆಹಾ, ಮುಳ್ಳಯ್ಯನಗಿರಿ, ರಂಗನಬೆಟ್ಟ ನೋಡ್ತಾ ಒಂದೊಂದೇ ಗುಟುಕು ಕುಡಿತಿದ್ರೆ ಸಿಗೋ ಸ‌ಂತೋಷ......