Thursday, June 18, 2009

ಯುಗಾದಿ ಹಬ್ಬದಂದು...

ಯುಗಾದಿ ಹಬ್ಬಕ್ಕೆ ಊರಿಗೆ ಹೋಗಿದ್ದೆ. ಹಬ್ಬದ ದಿನ ಬೆಳಗ್ಗೆ ಸ್ನಾನ ಮಾಡಿ, ಮಾವಿನಸೊಪ್ಪು ತರಲು ತೋಟಕ್ಕೆ ಹೋಗಿ ಮರ ಹತ್ತಿ ಸೊಪ್ಪು ಕುಯ್ದು ತಂದು ತೋರಣ ಕಟ್ಟಿ ನನ್ನ ಕೆಲಸವಾಯಿತೆಂದು ಟೀ.ವಿ ಹಾಕಿ ಕುಳಿತು ಕಲಾಸಿಪಾಳ್ಯ ನೋಡ್ತಾ ಕೂತ್ಕೊಂಡೆ.
ಅರ್ಧ ನೋಡಿರಬೇಕು, ಅಮ್ಮ ಬಂದು ಪೂಜೆ ಮಾಡಿಸ್ಕೊಂಡು ಬಾ ದೇವಸ್ಥಾನಕ್ಕೆ ಹೋಗಿ ಅಂದ್ರು. ನಾನು, ಅಮ್ಮ ಆಮೇಲೆ ಹೋದ್ರೆ ಆಗಲ್ವ ಆಗ್ಲೇ ಅರ್ಧ ಫಿಲ್ಮ್ ನೋಡಿದೀನಿ ಅಂದೆ..
ಅದಕ್ಕೆ ಅಮ್ಮ ಕ್ಯಾಕರಿಸಿ ಉಗಿದ್ರು (ಅವಿನಾಶ್ ಕಲಾಸಿಪಾಳ್ಯ ಫಿಲ್ಮಲ್ಲಿ ದರ್ಶನ್ ಗೆ ಬಯ್ಯೋ ಹಾಗೆ).
ಅಲ್ಲೇ ಇದ್ದ ಅಕ್ಕನ ನೋಟ, ದರ್ಶನ್ ರೌಡಿಗಳಿಗೆ ಕೊಡೋ ಲುಕ್ ಇತ್ತು.
ನಾನು ವಿಧಿಯಿಲ್ಲದೆ ದೇವಸ್ಥಾನದ ಕಡೆ ಹೆಜ್ಜೆ ಹಾಕಬೇಕಾಯಿತು....

ಇದೇನ ಸಭ್ಯತೆ ಇದೇನ ಸಂಸ್ಕೃತಿ...

ನಿನ್ನೆ ಕೆಲಸ ಮುಗಿಸಿಕೊಂಡು ಬಸ್ಸಿನಲ್ಲಿ ಹೋಗೋವಾಗ ಎಫ್ ಎಂ ಕೇಳ್ತಿದ್ದೆ, ಸಂಜೆ 6.30ಕ್ಕೆ 104 ಸ್ಟೇಶನ್ನಲ್ಲಿ ಏನೋ ಸ್ಪರ್ಧೆ ನಡೀತಾ ಇತ್ತು. ಸರಿ ಕೇಳೋಣ ಅಂದ್ಕೊಂಡು ಹಾಕಿ ಕುಳಿತೆ.
ಹಾಡು ಹೇಳೋ ಸ್ಪರ್ಧೆ ಅನ್ಸತ್ತೆ, ಒಬ್ಬಳು ಹುಡುಗಿ ಕರೆ ಮಾಡಿದ್ಲು. ಕಾರ್ಯಕ್ರಮ ನಡೆಸಿಕೊಡುವವನು ಶುರುಮಾಡಿ ಅಂದ, ಅವಳು 'ನಗುವ ನಯನ ಮಧುರ ಮೌನ...' ಅಂತ ಹಾಡಿದ್ಲು.
ಹಾಡಿದ ಮೇಲೆ, ಈ ನನ್ಮಗ ಆ ಹುಡುಗಿ ವಯಸ್ಸು ಕೇಳಿದ, ಅವಳು 19 ಅಂದ್ಲು. ಅದಕ್ಕೆ ಇವನು, ಇನ್ನೊಂದೆರಡು ವರ್ಷ ಜಾಸ್ತಿ ಇದ್ದಿದ್ರೆ ನಿಮ್ಮನ್ನ ಮದ್ವೆಯಾಗಿಬಿಡ್ತಿದ್ದೆ ಅನ್ನೋದಾ....
ಇದೇನಾ ಇವರುಗಳು ಇಲ್ಲಿವರೆಗೆ ಕಲಿತದ್ದು??
ಆ ಹುಡುಗನಿಗಂತೂ ಇನ್ನೂ ಬುದ್ಧಿ ಬಂದಿಲ್ಲ ಅಂದ್ರೂ ಆ ಸ್ಟೇಶನ್ನಲ್ಲಿ ಅವರನ್ನು ಸಂದರ್ಶನ ಮಾಡುವವರಿಗಾದ್ರೂ ಬುದ್ಧಿ ಬೇಡ್ವ???

ದಯವಿಟ್ಟು ಮಾನಿಟರ್ ಆರಿಸಿ ...

ನೀವು ಊಟಕ್ಕೆ ಹೋಗೋವಾಗ, ಕಾಫೀ, ಟೀ ಕುಡಿಯಲಿಕ್ಕೆ ಹೋಗೋವಾಗ ದಯವಿಟ್ಟು ಮಾನಿಟರ್ ಆರಿಸಿ ಹೋಗಿ.
ನಮ್ಮೂರಿನಲ್ಲಂತೂ ದಿನಕ್ಕೆ 6 ರಿಂದ 8 ಗಂಟೆ ಕರೆಂಟ್ ಇದ್ರೆ ಅದೇ ಹೆಚ್ಚು, ಅಲ್ಲಿಗೆ ಈ ಶತಮಾನ ಕಳೆದ್ರೂ ಜಾಸ್ತಿ ಕರೆಂಟ್ ಕೊಡೊಲ್ಲ. ಇಲ್ಲಾದ್ರು ಸ್ವಲ್ಪ ಉಳಿಸಿದ್ರೆ ಇಲ್ಲಿಗೇ ಇನ್ನೊಂದು ರೂಪದಲ್ಲಿ ಅನುಕೂಲ ಆಗತ್ತೆ.
ಯೋಚನೆ ಮಾಡಿ ಅಂತ ಹೇಳೋದಕ್ಕಿಂತ ಕಾರ್ಯರೂಪಕ್ಕೆ ತಗೊಂಡುಬನ್ನಿ ಅಂತ ಹೇಳೋದಕ್ಕೆ ಇಷ್ಟಪಡ್ತೀನಿ.

ನೀವೇನಂತೀರಿ???

ನಮ್ಮಕ್ಕನ ಮಗಳು ಒಂದು ಮೆಸೇಜ್ ಕಳ್ಸಿದ್ಲು....ಅದು ಹೀಗಿತ್ತು...
ಇವ‌ತ್ತಿನ‌ ಪ್ರಪ‌ಂಚ‌ದ‌ ನಿರಾಕ‌ರಿಸ‌ಲಾಗ‌ದ ಸ‌ತ್ಯಗ‌ಳು
1) ಇವ‌ತ್ತು ನ‌ಮ್ಮ ಹ‌ತ್ತಿರ‌ ದೊಡ್ಡ ಮ‌ನೆಗ‌ಳಿವೆ ಆದ‌ರೆ ಚಿಕ್ಕ ಕುಟುಂಬ‌.
2) ಜಾಸ್ತಿ ಪ‌ದ‌ವಿ ಆದ‌ರೆ ಸಾಮಾನ್ಯ ಜ್ನಾನ‌ ಕ‌ಡಿಮೆ.
3) ಕಾಯಿಲೆಗ‌ಳಿಗೆ ಹೊಸ‌/ಮುಂದುವ‌ರಿದ‌ ಚಿಕಿತ್ಸಾ ವಿಧಾನ‌ಗ‌ಳು ಆದ‌ರೆ ಕೆಟ್ಟ ಆರೋಗ್ಯ.
4) ಚ‌ಂದ್ರನ‌ನ್ನು ತ‌ಲುಪಿದ್ದೇವೆ ಆದ‌ರೆ ಪ‌ಕ್ಕದ‌ ಮ‌ನೆಯ‌ವ‌ರು ಯಾರು/ಹೇಗೆ ಅನ್ನೋದು ಗೊತ್ತಿಲ್ಲ.
5) ತುಂಬಾ ಆದಾಯ‌ ಆದ‌ರೆ ಮ‌ನ‌ಶ್ಯಾಂತಿ ಇಲ್ಲ.
ಲಿಸ್ಟ್ ಮಾಡ್ತಾ ಹೋದ್ರೆ ತುಂಬಾ ಇದೆ...


ಎಷ್ಟು ಸ‌ತ್ಯ ಅಲ್ವ???ನೀವೇನಂತೀರಿ???

ಅವ್ರು ಹಂಗೆ ನಾವ್ಯೆಲ್ಲ ಯಾಕೆ ಹಿಂಗೆ ???

ನಾನು ದಿನ ನಮ್ಮ ಆಫೀಸಿಗೆ ರಾಜಾಜಿನಗರದಿಂದ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಕೋರಮಂಗಲಕ್ಕೆ ಹೋಗ್ತೀನಿ. ಆ ಬಸ್ಸು ಮಹಾಲಕ್ಷ್ಮಿ ಲೇ ಔಟ್ನಿಂದ ಕೇಂದ್ರೀಯ ಸದನಕ್ಕೆ ಹೋಗುತ್ತೆ, ತುಂಬಾ ಜನ ಸರಕಾರಿ ನೌಕರರು ಅದರಲ್ಲಿ ಪ್ರಯಾಣ ಮಾಡ್ತರೆ. ಇವತ್ತು ನಾನು ಬ್ಯಾಗ್ ಹಾಕಿಕೊಂಡು ನಿಂತ್ಕೊಂಡಿದ್ದೆ, ಒಬ್ರು ಒಂದು 50 ವರ್ಷ ಇರಬಹುದು, ಅವ್ರದೊಂದು ಬ್ಯಾಗ್ ಇತ್ತು, ಪಾಪ ಆ ಮನುಷ್ಯ ನನ್ನ ಬ್ಯಾಗ್ನ ಕೇಳಿ ಇಟ್ಕೊಂಡ್ರು, ಅಲ್ದಲೆ ಇನ್ನೊಬ್ರದ್ದನ್ನು ಕೇಳಿ ಇಟ್ಕೊಂಡ್ರು. ಅವ್ರ ಹತ್ತಿರ 3 ಬ್ಯಾಗ್ .
ಎದುರುಗಡೆ ಒಬ್ಬ ಕೂತಿದ್ದ ನನ್ನ ವಯಸ್ಸಿನವನು, ಸುಮಾರು 24ರಿಂದ 27 ವರ್ಷ ಇರಬಹುದು. ಆ ಹುಡುಗ ಅವ್ರನ್ನ ನೋಡಿದ್ರು ನೋಡದವನ ಹಾಗೆ ಕೂತಿದ್ದ. ಆಮೇಲೆ ನಂಗೆ ಸೀಟು ಸಿಕ್ತು, ನಾನು 2 ಬ್ಯಾಗ್ ಅವ್ರಿಂದ ಇಸ್ಕೊಂಡು ಕೂತೆ.
ದೊಡ್ಡೋರಲ್ಲಿ ಇರೋ ಸಹಾಯ ಮನೋಭಾವ ನಮ್ಮಲ್ಲಿ ಯಾಕೆ ಇಲ್ಲ...
ಅವ್ರು ಹಂಗೆ ನಾವ್ಯೆಲ್ಲ ಯಾಕೆ ಹಿಂಗೆ???