Friday, July 1, 2011

ಬದುಕ ಬೆಳಗಿಸುವ ಬಯಕೆ ಬರಲಿ

ಹರೆಯದ ಹಸಿವನ್ನ

ತಡೆಯಲಾರದೇ ಎಡವಿದವರೇ

ಭಾವನೆಗಳ ಬಂಧಿಸದೆ

ಬಯಲಿನಲ್ಲಿ ಬಿಟ್ಟವರೇ

ಆಕರ್ಷಣೆಗಳನ್ನೆಲ್ಲ ಅನುರಾಗವೆಂದರಿತು

ಅಲ್ಪತೃಪ್ತಿಗಾಗಿ ಎಲ್ಲವನ್ನೂ ಅರ್ಪಿಸಿದವರೇ

ದುಶ್ಚಟಗಳಿಗೆ ದಾಸರಾಗಿ

ದಾರಿಕಾಣದೆ ಸಾಗುತ್ತಿರುವವರೇ

ತೆವಲುಗಳ ತೀರಿಸಿಕೊಳ್ಳಲು

ತಪ್ಪು ಹೆಜ್ಜೆಯಿಟ್ಟವರೇ

ಸಜ್ಜನರಂತೆ ಸೋಗುಹಾಕಿ

ಸರ್ವಸ್ವವನ್ನೂ ಸೂರೆಗೈದವರೇ

ಮುಗ್ಧರಿಗೆ ಮೋಸಮಾಡಿ

ಮಾನವೀಯತೆಯನ್ನೇ ಮರೆತವರೇ

ಇನ್ನಾದರೂ ಬದುಕ ಬೆಳಗಿಸುವ

ಬಯಕೆ ಬರಲಿ


No comments:

Post a Comment