Thursday, June 2, 2011

ನನಗೂ ಸ್ವಲ್ಪ ಕೊಡಿ




ಮಾರ್ಚ್ ತಿಂಗಳ ಎಲ್ಲ ವೀಕೆಂಡಲ್ಲೂ ಊರಿಗೆಹೋಗಿದ್ದೆ. ಊರಲ್ಲಿ ಮಳೆಗಾಗಿ ಕಾಯ್ತಿದ್ರು. ಸಲನಾದ್ರೂ ಚೆನ್ನಾಗಿ ಮಳೆ ಬಂದು ಕಾಫಿಚೆನ್ನಾಗಿ ಹೂ ಬಿಡ್ಲಿ ಅಂತಿದ್ರು. ನಾನೂಹೋದಾಗಲೆಲ್ಲ ಮಳೆಗೆ ಕಾಯ್ತಿದ್ದೆ, ಜೊತೆಗೆಕಾಫಿಯ ಹೂವಿಗೆ ಸಹ. ಹೂವಿನಿದ ತುಂಬಿಕಂಗೊಳಿಸುವ ತೋಟವನ್ನ ನೋಡೋದೇ ಕಣ್ಣಿಗೆಹಬ್ಬ, ಎಲ್ಲಿ ಕಣ್ಣು ಹಾಯಿಸಿದರೂ ಬಿಳೀಹೂಗಳದ್ದೇ ರಾಶಿ, ಅಲ್ಲದೆ ಹೂವಿನ ಘಮಲು,ಆಹಾ ಏನು ಪರಿಮಳ, ದಿನಾ ಪೂರ್ತಿ ಅಲ್ಲೇಕುಳಿತಿರೋಣ ಎಂದನ್ನಿಸುತ್ತದೆ. ವರ್ಷ ಸೌಭಾಗ್ಯ ಸಿಕ್ಕಿರ್ಲಿಲ್ಲ ಯಾಕಂದ್ರೆ ಹೂವು ಆಗಿದ್ದುವಾರದ ಮಧ್ಯದಲ್ಲಿ :(. ವೀಕೆಂಡ್ ಬರೋಹೊತ್ತಿಗೆ ಎಲ್ಲ ಹೂವು ಉದುರಿಹೋಗಿರ್ತಿತ್ತು.

ಒಂದಿನ ಮೋಡ ಆದ ಹಾಗೆ ಆಗ್ತಿತ್ತು, ದೂರದಗಿರಿಯಲ್ಲಿ ಕಪ್ಪನೆಯ ಮೋಡ, ಸ್ವಲ್ಪ ಹೊತ್ತಾದಮೇಲೆ ಮಳೆ. ಇತ್ತ ಕಡೆ ಗಾಳಿ ಬೀಸುತ್ತಿತ್ತು,ಮಳೆಯೂ ಬರುತ್ತಿರುವ ಹಾಗನ್ನಿಸುತ್ತಿತ್ತು. ಎಲ್ಲೋ ದೂರದ ಆಸೆ, ಇನ್ನೇನು ಕಾಲು ಘಂಟೆಯಲ್ಲಿ ಇಲ್ಲಿಗೆ ಬರತ್ತೆ, ಹೋಗಿ ನೆನೆಯಬಹುದು ಅಂತ.ಆಮೇಲೆ ಮಳೆ ಬಂದ್ರೆ - ದಿನ ಆದ್ಮೇಲೆ ಚಿಗುರು ಬಿಟ್ಟು ಹೂವು ಆಗೋ ಹೊತ್ತಿಗೆ ವಾರ ಆಗತ್ತೆ, ಮುಂದಿನ ವಾರ ಬರಬಹುದು ಅಂತದೂರದ ಆಸೆ. ದೂರದಲ್ಲಿ ಜೋರಾಗಿ ಸುರಿಯುತ್ತಿದ್ದ ಮಳೆ ಗಾಳಿ ಬೀಸುತ್ತಿದ್ದಂತೆ ಇತ್ತ ಕಡೆ ಬರ್ತಾ ಇತ್ತು. ಅಲ್ಲೇ ಕಣದಲ್ಲಿ ನಿಂತು ನೋಡುತ್ತಿದ್ದನನಗೆ, ಪಕ್ಕದ ಊರಲ್ಲಿ ಹನಿಗಳು ಬಿದ್ದಾಗ ಆದ ಸಂತಸ ಅಷ್ಟಿಷ್ಟಲ್ಲ. ಆದರೆ ಸ್ವಲ್ಪ ಹೊತ್ತಾದ ಮೇಲೆ ಅಲ್ಲಿ ಬೀಳುವುದೂ ಕಡಿಮೆಯಾಯ್ತು.ಕಾಯುತ್ತಿದ್ದ ನಾನು ಸಪ್ಪೆ ಮೊರೆ ಹಾಕಿಕೊಂಡು ಮನೆ ಒಳಗೆ ಹೋದೆ.

ಬೆಂಗಳೂರಿಗೆ ಬಂದ ಮಾರನೇ ದಿನ ಅಮ್ಮ ಫೋನ್ ಮಾಡಿ ಮಳೆ ಬಂತು ಅಂದಾಗ ಮೊದಲಿಗೆ ಸ್ವಲ್ಪ ದುಃಖ ಆದರೆ ಮರುಕ್ಷಣವೇ ಖುಷಿ.ಮುಂದಿನ ವಾರ ಹೇಗಿದ್ದರೂ ಯುಗಾದಿಗೆ ಊರಿಗೆ ಹೋಗಬೇಕು ಆಗ ಇಡೀ ತೋಟ ಸುತ್ತಾಡಿ ಅಲ್ಲಿಯ ಸೊಬಗನ್ನು, ಜೊತೆಗೆಸುವಾಸನೆಯನ್ನೂ ಸವಿಯಬಹುದಲ್ಲ ಎಂದೆನಿಸಿತು.

ಯಾವಾಗ ಶುಕ್ರವಾರ ಆಗತ್ತೋ ಅಂತಕಾಯ್ತಿದ್ದೆ. ಅಂತೂ ಬಂತು, ರಾತ್ರಿ ಹೊರಟುಬೆಳಗ್ಗೆ ಚಿಕ್ಕಮಗಳೂರು ತಲುಪಿ ಊರಿನ ಬಸ್ಹತ್ತಿದಾಗ ತಲೆಯಲ್ಲಿದ್ದದ್ದು ಒಂದೇ ಯೋಚನೆ,ಹೂವು ಹೂವು ಹೂವು. ಅರ್ಧ ಘಂಟೆಪ್ರಯಾಣದ ನಂತರ ಊರು ತಲುಪಿಬಸ್ಸಿನಿಂದ ಇಳಿದು ತೋಟದ ಹಾದಿಯಲ್ಲಿಮನೆಯ ಕಡೆ ಹೆಜ್ಜೆ ಹಾಕುವಾಗಸ್ವರ್ಗದಲ್ಲಿದ್ದೆನೇನೋ ಅನ್ನೋ ಅನುಭವ.

ಕಾದು ಕೆಂಪಾಗಿದ್ದ ಇಳೆಯನ್ನು
ಆಗಸವು ವರ್ಷಧಾರೆಯ ಸುರಿಸಿ
ಹನಿಯಿಂದ ಚುಂಬಿಸಿ
ಎಲ್ಲೆಡೆ ಹಸಿರನ್ನು ಪಸರಿಸಿದೆ



ದಿನ ಪೂರ್ತಿ ನಾನು ನನ್ನ ಬಹುತೇಕಸಮಯವನ್ನು ತೋಟದಲ್ಲೇ ಕಳೆದಿದ್ದೆ.
.................................................

ಯುಗಾದಿಯ ದಿನ ನನ್ನ ಕೆಲಸ ಮುಗಿಸಿ, ಅಂದರೆ ತೋಟಕ್ಕೆ ಹೋಗಿ ಮಾವಿನ ಎಲೆ, ಹಲಸಿನ ಎಲೆ ತಂದು ತೋರಣ ಮಾಡಿ ಕಟ್ಟಿದ್ದಾಯ್ತು.ಇನ್ನೇನಿದ್ದರೂ ದೇವರಿಗೆ ಆರತಿ ಮಾಡಿ ಹೊಟ್ಟೆಗೆ ಕೆಲಸ. ಅದಕ್ಕೆ ಇನ್ನೂ ಸಮಯವಿದ್ದುದ್ದರಿಂದ ಅವತ್ತಿನ ಪೇಪರ್ ತಂದು ಅಂಗಳದಲ್ಲಿ ಕುಳಿತೆ.ಬಿಸಿಲು ತುಂಬಾ ಇತ್ತು. ಪೇಪರ್ ಹರಡಿಕೊಂಡು ಏನೋ ಓದುತ್ತಿದ್ದೆ, ಸಡನ್ನಾಗಿ ಮೋತಿ (ಮನೆಯ ನಾಯಿ) ಓಡಿಬಂದು ನನ್ನನ್ನ ನೋಡಿ ಬಾಲಅಲ್ಲಾಡಿಸಿ ಲಾನಲ್ಲಿದ್ದ ಹೂವಿನ ಪಾಟಿನ ಹತ್ತಿರ ಹೋಗಿ ನೀರಿಗೆ ತನ್ನ ನಾಲಿಗೆ ಚಾಚಿ ನೀರನ್ನು ಹೀರತೊಡಗಿತು. ಅಲ್ಲಿ ಅದಕ್ಕೆ ಇದ್ದ ಒಂದೇಒಂದು ನೀರಿನ ಮೂಲ ಅಂದರೆ ಅದೇ :( ನೀರು ಕುಡಿದು ನನ್ನ ಪಕ್ಕ ಬಂದು ಮಲಗಿತು.


ಹಾಗೆ ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದೆ, ಆಗಪಾರಿವಾಳವೊಂದು ಬಂದು ಪಾಟಿನ ಹತ್ತಿರಕುಳಿತು ಅತ್ತ ಇತ್ತ ಹಲವಾರು ಬಾರಿ ನೋಡಿಆಮೇಲೆ ನೀರಿಗೆ ತನ್ನ ಕೊಕ್ಕನ್ನು ಹಾಕಿತು.ಮಾಡುವುದಕ್ಕೆ ಬೇರೆ ಕೆಲಸಇರಲಿಲ್ಲವಾದುದರಿಂದ
ಅಲ್ಲೇ ಕುಳಿತು ಇನ್ನೂ ಯಾವ್ಯಾವ ಹಕ್ಕಿಗಳುಬರಬಹುದು ಅಂತ ಕಾಯ್ತಿದ್ದೆ. ಕಾಗೆ, ಮಡಿವಾಳಹಕ್ಕಿ, ನನಗೆ ಹೆಸರು ಗೊತ್ತಿಲ್ಲದ ಹಲವುಹಕ್ಕಿಗಳು ಬಂದು ನನ್ನನ್ನು ನೋಡಿ, ಕೆಳಗೆಮಲಗಿದ್ದ ಮೋತಿಯನ್ನೊಮ್ಮೆ ನೋಡಿ ಯಾರೂತೊಂದರೆ ಮಾಡುವುದಿಲ್ಲ ಎಂದರಿತು ನೀರನ್ನುಕುಡಿದು ಹೋಗುತ್ತಿದ್ದವು. ಲಾನ್ ಮಾಡಿ ಪಾಟಲ್ಲಿನೀರು ಇಟ್ಟದ್ದು ಹೀಗಾದರೂ ಉಪಯೋಗಕ್ಕೆಬಂದಿತ್ತು.

..............................................................................

ರಾತ್ರಿ ಹೊರಟು ಬೆಳಗ್ಗೆ ಬೆಂಗಳೂರಿಗೆ ಬಂದೆ, ನಮ್ಮ ಮನೆಯ (ಬೆಂಗಳೂರಿನಲ್ಲಿಯ ಬಾಡಿಗೆ ಮನೆ) ವರಾಂಡ ಅಗಲವಿತ್ತು, ಆಫೀಸಿಗೆ ಹೊರಡುವಮುನ್ನ ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ನೀರನ್ನು ಇಟ್ಟು ಹೋಗಿದ್ದೆ. ಕೆಲಸ ಮುಗಿಸಿ ಸಂಜೆ ವಾಪಸ್ ಬರೋ ಹೊತ್ತಿಗೆ ಕಾಲು ಭಾಗ ನೀರುಖಾಲಿಯಾಗಿತ್ತು, ಅಬ್ಬ ಯಾವ್ದೋ ಹಕ್ಕಿಗಳು ಕುಡಿದಿರಬಹುದು ಅಂತ ಅಂದ್ಕೊಂಡೆ.


ಸಂಜೆ ಬಂದ ಮೀಟರ್, 'ಏನಪ್ಪಾ ನೀರು ಇಟ್ಟಿದೀಯ' .
'
ಹ್ಞೂ, ಬಾಯಾರಿಕೆ ಆದಾಗ ಹೀಗೆ ಯಾವ್ದಾದ್ರೂ ಹಕ್ಕಿಗಳು ಕುಡಿಯಲಿ ಅಂತ'
'
ಅದೇನು ಹಕ್ಕಿ ಕುಡಿದು ಖಾಲಿಯಾಗಿರೋದು ಅಂದ್ಕೊಂಡ್ಯ?'
'
ಹ್ಞೂ, ಮತ್ತೆ ಇನ್ಹೇಗೆ ಖಾಲಿಯಾಗತ್ತೆ?'
'
ಬಿಸಿಲಿಗೆ ಡಬ್ಬ ಕಾದು ನೀರು ಖಾಲಿಯಾಗಿರೋದು'

ನಂಗೆ ಬೇಜಾರಾಯ್ತು. ಛೆ, ಹೀಗಾಯ್ತಲ್ಲ ಅಂತ. ಆದರೂ ವಾರ ಪೂರ್ತಿ ನೀರು ತುಂಬಿಸಿ ಹೋಗ್ತಿದ್ದೆ, ಸಂಜೆ ಹೊತ್ತಿಗೆ ಕಾಲು ಭಾಗಖಾಲಿಯಾಗಿರ್ತಿತ್ತು. ಆದ್ರೆ ಹೇಗೆ ಅನ್ನೋದು ಇನ್ನೂ ನಿಗೂಢವಾಗಿತ್ತು. ಆಗಲಿ ವೀಕೆಂಡ್ನಲ್ಲಿ ಚೆಕ್ ಮಾಡೋಣ ಅಂದ್ಕೊಂಡೆ.
ಶನಿವಾರ ನೀರು ಹಾಕಿ ಚಾವಡಿಯಲ್ಲಿ ಬಂದು ಪೇಪರ್ ಓದುತ್ತಾ ಅಲ್ಲಿ ಆಗಾಗ ನೋಡುತ್ತಾ ಕುಳಿತೆ. ಅರ್ಧ ಘಂಟೆ ಆದರೂ ಯಾವುದರಸುಳಿವಿರಲಿಲ್ಲ. ಮೀಟರ್ ಹೇಳಿದ್ದೇ ಸರಿ ಅಂದ್ಕೊಂಡೆ. ಇನ್ನು ಅಲ್ಲಿಟ್ಟು ಪ್ರಯೋಜನವಿಲ್ಲ, ಸಂಜೆ ಅದನ್ನ ಎಸೆದು ಬಿಡೋಣ ಅಂದ್ಕೊಂಡೆ.
ಒಳಗೆ ಹೋಗಿ ಕಾಫಿ ಮಾಡ್ಕೊಂಡು ಬಂದು ಮತ್ತೆ ಪೇಪರ್ ಓದ್ತಾ ಕೂತೆ. ಹಾಗೆ ಅತ್ತ ಕಡೆ ಕಣ್ಣು ಹಾಯಿಸಿದೆ, ಅಳಿಲೊಂದು ಬಂದು ಡಬ್ಬನಆಕಡೆ ಈಕಡೆ ಮೂಸಿ, ಒಳಗೆ ನೀರಿರುವುದನ್ನು ನೋಡಿ ಕುಡಿದು ಓಡಿಹೋಯ್ತು. ಅಬ್ಬ, ಆಗ ಸಮಾಧಾನವಾಯ್ತು. ಆಮೇಲೆ ಆಗಾಗ ಕಾಗೆ,ಪಾರಿವಾಳಗಳು ಬಂದು ನೀರು ಕುಡಿದು ಹೋಗುತ್ತಿದ್ದವು.

ಅಂದಿನಿಂದ ಡಬ್ಬದಲ್ಲಿ ನೀರು ತುಂಬಿ ಆಫೀಸಿಗೆ ಹೊರಡುವದಾಗಿದೆ.

No comments:

Post a Comment