Wednesday, June 1, 2011

ಚುರ್ಮುರಿ - ೧೩

೪೩) ರಸ್ತೆಯಲ್ಲಿ ಬಿದ್ದಿದ್ದ ಮಾಂಸವನ್ನು ತಿನ್ನಲು ಹೋದ ನಾಯಿ ಸ್ವಲ್ಪ ಹೊತ್ತಿಗೆ ತಾನೇ ಮಾಂಸವಾಗಿತ್ತು.

೪೪) ಮಳೆಯಲ್ಲಿ ತನ್ನ ಕಾರಿನ ಕೊಳೆ ತೊಳೆದುಹೋಗಲಿ ಎಂದು ಅವನು ಹೊರಗಡೆ ಕಾರನ್ನು ನಿಲ್ಲಿಸಿದ, ಬೃಹತ್ ಗಾತ್ರದ ಆಲಿಕಲ್ಲುಗಳು ಅವನ ಕಾರನ್ನು ಮುದ್ದೆ ಮಾಡಿದ್ದವು.

೪೫) ಮೆಜೆಸ್ಟಿಕ್ನಲ್ಲಿ ಕಷ್ಟಪಟ್ಟು, ಎಲ್ಲರೊಂದಿಗೆ ಗುದ್ದಾಡಿ ತನ್ನ ಬ್ಯಾಗನ್ನು ಸ್ವಲ್ಪ ಹರಿದುಕೊಂಡು ಬಸ್ಸಿನಲ್ಲಿ ಹಾಗೂ ಹೀಗೂ ಒಂದು ಸೀಟನ್ನು ಹಿಡಿದುಕೊಂಡು ಕುಳಿತನು. ಆನಂದ್ ರಾವ್ ಸರ್ಕಲ್ ಹತ್ತಿರ ಬಸ್ ಕೆಟ್ಟು ನಿಂತಿತು.

೪೬) ಅವನು ನ್ಯಾನೋ ಕಾರನ್ನು ಕೊಂಡುಕೊಂಡು, ಅದನ್ನು ಓಡಿಸಲು ಒಬ್ಬ ಡ್ರೈವರನ್ನು ಇಟ್ಟುಕೊಂಡನು.

೪೭) ಅವಳ ಮುಖದಲ್ಲಿತ್ತೊಂದು ಪಿಂಪಲ್ ಹಾಗಾಗಿ ಕಾಣುತ್ತಿರಲಿಲ್ಲ ಅವಳ ಡಿಂಪಲ್.

No comments:

Post a Comment