Thursday, April 22, 2010

ಚುರ್ಮುರಿ - ೩

೧) ಅವನು ಆ ಮ್ಯಾಚ್ ಪೂರ್ತಿ ನೋಡಬೇಕೆಂದು ಬೆಳಗ್ಗೆ ಕುಳಿತ, ೫೦ ಓವರಲ್ಲಿ ಪಾಕಿಸ್ತಾನ ಟೀಮ್ ೨೭೯ ರನ್ ಹೊಡೆದಿತ್ತು, ಸೆಕೆಂಡ್ ಇನಿಂಗ್ಸಲ್ಲಿ ಇಂಡಿಯಾ ಟೀಮ್ನ ಆಟ ನೋಡುತ್ತಿದ್ದ. ಒಂದೂ ಬಾಲ್ ಮಿಸ್ಸಾಗಬಾರದೆಂದು ಅವರಮ್ಮನ ಹತ್ತಿರ ತಿಂಡಿ ತರಿಸಿಕೊಂಡು ತಿಂದ. ಲಂಚ್ ಬ್ರೇಕಲ್ಲಿ ಊಟಕ್ಕೆ ಹೋದ.
ಇಂಡಿಯಾ ಟೀಮ್ ೪೯.೫ ಓವರಲ್ಲಿ ೯ ವಿಕೆಟ್ಗೆ ೨೭೪ ರನ್ ಹೊಡೆದಿತ್ತು, ಬ್ಯಾಟಿಂಗ್ ಮಾಡ್ತಿದ್ದವನು ಯುವರಾಜ್ ಸಿಂಗ್. ಬೌಲರ್ ಬಂದು ಬಾಲ್ ಎಸೆದ, ಒಂದು ಪಿಚ್ ಬಿದ್ದು ಪುಟಿಯುವಷ್ಟರಲ್ಲಿ ಕರೆಂಟ್ ಹೋಗಿತ್ತು.

೨) ಅಕ್ಕಿಯ ರೇಟು ಗಗನಕ್ಕೇರಿದ್ದರೂ ಭತ್ತ ಇನ್ನೂ ಪಾತಾಳದಲ್ಲಿರುವುದನ್ನು ಮನಗಂಡ ಅವನು ಇದ್ದ ಗದ್ದೆಯನ್ನೆಲ್ಲ ತೋಟ ಮಾಡಿದನು.

೩) ಅವನು ಕಷ್ಟಪಟ್ಟು ದುಡಿದ ದುಡ್ಡನ್ನು ಮಗನಿಗೆ ಸರಕಾರೀ ಕೆಲಸ ಸಿಗಲೆಂದು ಒಬ್ಬ ರಾಜಕಾರಣಿಗೆ ಕೊಟ್ಟ.
ಇವನ ಪಕ್ಕದ ಮನೆಯ ನೆಂಟರೊಬ್ಬರು ಅದೇ ಕೆಲಸಕ್ಕೆ ಅದೇ ರಾಜಕಾರಣಿಗೆ ದುಡ್ಡು ಕೊಟ್ಟಿದ್ದರು.
ವಿಷಯ ತಿಳಿದ ಅವನು ದುಡ್ಡನ್ನು ತಿಮ್ಮಪ್ಪನ ಹುಂಡಿಗೆ ಹಾಕಿದೆನೆಂದು ತನ್ನನ್ನು ತಾನೇ ಸಮಾಧಾನಗೊಳಿಸಿಕೊಂಡ.

No comments:

Post a Comment