Thursday, September 10, 2009

ಏಸಲ್ಲೇಶ್ವರ

ನಿನ್ನೆ ನಾನು ಬಾಬು ಮಲ್ಲೇಶ್ವರಂಲ್ಲಿ ಸೇವಾ ಸದನಕ್ಕೆ ಹೋಗೋಣ ಅಂತ ನಿರ್ಧಾರ ಮಾಡಿ ಹೊರಟ್ವಿ, ಅಲ್ಲಿ ಕಳಲು ವಾದನ ಮತ್ತೆ ಭರತ ನಾಟ್ಯ ಕಾರ್ಯಕ್ರಮ ಇತ್ತು. ನವರಂಗಿಂದ ಮಲ್ಲೇಶ್ವರಂಗೆ ನಡ್ಕೊಂಡು ಹೋಗ್ತಿದ್ವಿ. ಎಮ್ ಇ ಎಸ್ ಕಾಲೇಜ್ ಹತ್ರ ಹೋಗೋವಾಗ, ಕಾಲೇಜ್ ಎದ್ರುಗಡೆ ಏಸು, ಅಲ್ಲಾ ಮತ್ತೆ ಈಶ್ವರನ ಫೋಟೋ ಹಾಕಿ ಇಲ್ಲಿ ಮೂತ್ರ ಮಾಡ್ಬಾರ್ದು ಅಂತ ಹಾಕಿದ್ರು.

ನಾನು, ಬಾಬುಗೆ. ಬಾಬು, ಕುಡ್ಕ ಬಂದ್ರೆ ಯಾವ ದೇವ್ರು ಅಂತ ನೋಡೋಲ್ಲ ಸುಮ್ನೆ ಅಭಿಷೇಕ ಮಾಡಿ ಹೋಗ್ತಾನೆ ಅಂದೆ.

ಮತ್ತೆ, ಮೂರೂ ದೇವ್ರನ್ನ ಒಂದೇ ಫೋಟೋದಲ್ಲಿ ಹಾಕಿದ್ರೆ ಹೆಂಗೆ ಅಂದೆ? ಬಾಬು ಇದ್ದವನು, ಹಂಗೆ ಮಾಡಿದ್ರೆ ಒಳ್ಳೆದು ಬ್ರಹ್ಮ ವಿಷ್ಣು ಮಹೇಶ್ವರನ ಹಾಗೆ ಮೂರೂ ದೇವ್ರನ್ನ ಒಂದೇ ಫೋಟೋದಲ್ಲಿ ಹಾಕ್ಬಹುದು ಅಂದ.

ಒಳ್ಳೆ ಉಪಾಯ ಬಾಬು ಅಂದು, ಅದ್ಕೆ ಹೆಸ್ರು ಹಿಂಗೆ ಕೊಟ್ರೆ ಹೆಂಗೆ ಅಂದೆ.

ಹೆಂಗೆ ಚಿಕ್ಕು? ಅಂದ

"ಏಸಲ್ಲೇಶ್ವರ" ಅಂದೆ. ಮಸ್ತ್ ಐಡಿಯಾ ಅಂದ....

No comments:

Post a Comment