Thursday, September 10, 2009

ತಿಥಿಗೆ ಕರೀತಾರೆ ಹೋಗಿಬರೋವಂತೆ

ಮೊನ್ನೆ ಊರಿಗೆ ಹೋಗಿದ್ದೆ, ಮನೆಯಲ್ಲಿ ಟಿ.ವಿ ನೋಡ್ತಿದ್ದೆ. ಗೌಡ್ರು ಫ್ಹಿಲ್ಮ್ ಹಾಕಿದ್ರು, ಕ್ಲೈಮ್ಯಾಕ್ಸ್ ಸೀನ್ ಬಂತು. ನಮ್ಮಮ್ಮನೂ ನೋಡೋದಕ್ಕೆ ಬಂದು ಕೂತ್ಕೊಂಡ್ರು. ಫ್ಹಿಲ್ಮಲ್ಲಿ ಶೃತಿ ಸಾಯ್ತಾಳೆ ಅವಳಣ್ಣ (ಅಂಬರೀಷ್) ಹೆಣವನ್ನು ಹೊತ್ಕೊಂಡು ಹೋಗ್ತಾನೆ. ಅಲ್ಲಿಗೆ ಚಿತ್ರದ ಕೊನೆ.

ನಮ್ಮಮ್ಮ ಅದನ್ನ ನೋಡಿ ‘ಛೆ, ಸುಡೋದನ್ನಾದ್ರೂ ತೋರಿಸ್ಬಹುದಿತ್ತು ಅಂತ ಅಂದ್ರು’

ನಾನು ಅದಕ್ಕೆ ‘ಸ್ವಲ್ಪ ಹೊತ್ತು ಕಾಯಿ, ಬ್ರೇಕ್ನ ನಂತರ ತಿಥಿಗೆ ಕರೀತಾರೆ ಹೋಗಿಬರೋವಂತೆ ಅಂದೆ’

........................................................................................................................‍‍‍‍‍‍‍‍‍‍‍‍

ಊಟಕ್ಕೆ ನಾನು, ನಮ್ಮಪ್ಪ ಕೂತಿದ್ವಿ. ತಟ್ಟೆಗೆ ಅಮ್ಮ ಪಲಾವ್ ಹಾಕಿದ್ರು. ಅದಾದ ಮೇಲೆ ಒಂದು ಪಾತ್ರೆಯಲ್ಲಿ ಅನ್ನ ತಂದಿಟ್ರು (ನಮ್ಮಲ್ಲಿ ಅನ್ನ ಜಾಸ್ತಿ ಮಾಡ್ತಾರೆ, ಮಾರನೇ ದಿನ ರೊಟ್ಟಿ ಮಾಡಲಿಕ್ಕೆ).

ನಮ್ಮಪ್ಪ ಅದನ್ನ ನೋಡಿ 'ಓಹೋ ಒಂದು ಖಂಡುಗ ಮಾಡಿದ್ದಾರೆ ನೋಡೋ ಮಾರಾಯ. ಇನ್ನೊಂದು ವಾರ ಅಡಿಗೆ ಮಾಡದೆ ಆರಾಮಾಗಿರ್ಬಹುದು ನಿಮ್ಮ ಅಮ್ಮ'
........................................................................................................................

ನಿನ್ನೆ ನಮ್ಮಮ್ಮ ನಮ್ಮೂರಿಂದ ಬೆಂಗ್ಳೂರಿಗೆ ಬರೋ ಬಸ್ಸಿನ ಕಂಡಕ್ಟರ್ ಹತ್ತಿರ ಹೋಗಿ 'ನಮ್ಮ ಮಗಳು ಬೆಂಗ್ಳೂರಲ್ಲಿ ಕಾಯ್ತಿರ್ತಾಳೆ ಅವಳಿಗೆ ಈ ಹಲಸಿನಹಣ್ಣು ತಲುಪಿಸಿಬಿಡಿ' ಅಂತ ಹೇಳಿದ್ರಂತೆ. ಅದ್ಕೆ ಕಂಡಕ್ಟರ್, ಡ್ರೈವರ್ ಇಬ್ರೂ ಸಹ 'ಅಮ್ಮ, ಹಣ್ಣು ಸುವಾಸನೆ ಬರ್ತಿದೆ, ನಾವೇ ಕತ್ತರಿಸಿ ತಿನ್ತೀವಿ' ಅಂದ್ರಂತೆ.

No comments:

Post a Comment