Thursday, June 18, 2009

ಯುಗಾದಿ ಹಬ್ಬದಂದು...

ಯುಗಾದಿ ಹಬ್ಬಕ್ಕೆ ಊರಿಗೆ ಹೋಗಿದ್ದೆ. ಹಬ್ಬದ ದಿನ ಬೆಳಗ್ಗೆ ಸ್ನಾನ ಮಾಡಿ, ಮಾವಿನಸೊಪ್ಪು ತರಲು ತೋಟಕ್ಕೆ ಹೋಗಿ ಮರ ಹತ್ತಿ ಸೊಪ್ಪು ಕುಯ್ದು ತಂದು ತೋರಣ ಕಟ್ಟಿ ನನ್ನ ಕೆಲಸವಾಯಿತೆಂದು ಟೀ.ವಿ ಹಾಕಿ ಕುಳಿತು ಕಲಾಸಿಪಾಳ್ಯ ನೋಡ್ತಾ ಕೂತ್ಕೊಂಡೆ.
ಅರ್ಧ ನೋಡಿರಬೇಕು, ಅಮ್ಮ ಬಂದು ಪೂಜೆ ಮಾಡಿಸ್ಕೊಂಡು ಬಾ ದೇವಸ್ಥಾನಕ್ಕೆ ಹೋಗಿ ಅಂದ್ರು. ನಾನು, ಅಮ್ಮ ಆಮೇಲೆ ಹೋದ್ರೆ ಆಗಲ್ವ ಆಗ್ಲೇ ಅರ್ಧ ಫಿಲ್ಮ್ ನೋಡಿದೀನಿ ಅಂದೆ..
ಅದಕ್ಕೆ ಅಮ್ಮ ಕ್ಯಾಕರಿಸಿ ಉಗಿದ್ರು (ಅವಿನಾಶ್ ಕಲಾಸಿಪಾಳ್ಯ ಫಿಲ್ಮಲ್ಲಿ ದರ್ಶನ್ ಗೆ ಬಯ್ಯೋ ಹಾಗೆ).
ಅಲ್ಲೇ ಇದ್ದ ಅಕ್ಕನ ನೋಟ, ದರ್ಶನ್ ರೌಡಿಗಳಿಗೆ ಕೊಡೋ ಲುಕ್ ಇತ್ತು.
ನಾನು ವಿಧಿಯಿಲ್ಲದೆ ದೇವಸ್ಥಾನದ ಕಡೆ ಹೆಜ್ಜೆ ಹಾಕಬೇಕಾಯಿತು....

No comments:

Post a Comment